masthmagaa.com:

ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಕಾರಜೋಳ ಗ್ರಾಮಸ್ಥರು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ನೀಡಿದ್ದ ಬಂಗಾರದ ಕಿರೀಟವನ್ನ ಅವರು ಸರ್ಕಾರಕ್ಕೆ ಕೊಟ್ಟಿದ್ದಾರೆ. ಈ ಕಿರೀಟ 140 ಗ್ರಾಂ ತೂಕವಿದೆ. ಇವತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರನ್ನ ಭೇಟಿಯಾದ ಉಪಮುಖ್ಯಮಂತ್ರಿಗಳು ಕಿರೀಟವನ್ನ ಹಸ್ತಾಂತರಿಸಿದ್ರು. ಈ ಬಗ್ಗೆ ಟ್ವೀಟ್ ಮಾಡಿರುವ ಡಿಸಿಎಂ ಗೋವಿಂದ ಕಾರಜೋಳ, ‘ನನ್ನ ಹುಟ್ಟೂರಿನ ಜನ ಪ್ರೀತಿ, ಅಭಿಮಾನದಿಂದ ನನಗೆ 140 ಗ್ರಾಂ ತೂಕದ ಚಿನ್ನದ ಕಿರೀಟ ಕೊಟ್ಟು ಸನ್ಮಾನಿಸಿದ್ದರು. ಆದ್ರೆ ಶಾಸಕನಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದರಿಂದ ಇದನ್ನ ಕೊಟ್ಟಿರೋದ್ರಿಂದ ಇದು ಸರ್ಕಾರಕ್ಕೆ ಸಲ್ಲಬೇಕು. ಹೀಗಾಗಿ ಅದನ್ನ ಸರ್ಕಾರಕ್ಕೆ ಒಪ್ಪಿಸಿದ್ದೇನೆ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply