masthmagaa.com:
ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ 26 ಕಿಲೋಮೀಟರ್ ಬೃಹತ್ ರೋಡ್ ಶೋ ನಡೆಸಿದ್ದಾರೆ. ರೋಡ್ ಶೋ ಬಳಿಕ ಮೋದಿ ಬೆಂಗಳೂರಿನಿಂದ ಬಾದಾಮಿಗೆ ತೆರಳಿ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಬಾದಾಮಿಯಲ್ಲಿ ಮಾತಾಡಿದ ಮೋದಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜನರ ಭಾವನೆಗಳು ಏನು ಅಂತ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿಲ್ಲ. ಈಗ ಮತ್ತೊಂದು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದ ಸಿದ್ದರಾಮಯ್ಯರನ್ನ ಜನ ಗೆಲ್ಲಿಸಿದರು. ಆದ್ರೆ, ಗೆಲ್ಲಿಸಿರುವ ಜನರನ್ನ ತಿರಸ್ಕರಿಸಿ ಓಡಿ ಹೋಗಿದ್ದಾರೆ ಅಂತದು ಮೋದಿ ಸಿದ್ದರಾಮಯ್ಯಗೆ ತಿವಿದಿದ್ದಾರೆ. ಇನ್ನು ಈ ಕಡೆ ಮೋದಿಗೆ ರೋಡ್ ಶೋ ವೇಳೆ ಯಾವ ರೀತಿ ಭದ್ರತೆ ಒದಗಿಸಲಾಗುತ್ತೆ ಅಂತ ತಿಳಿಯೋಕೆ ಮಾರಿಷಸ್, ನೇಪಾಳ ಹಾಗೂ ಭೂತಾನ್ನಿಂದ ಪೊಲೀಸರು ಬಂದಿದ್ರು. ಬೆಂಗಳೂರಿಗೆ ಆಗಮಿಸಿದ್ದು ಮೂರು ದೇಶಗಳ ಪೊಲೀಸರು ಪ್ರಧಾನಿಗಳಿಗೆ ಯಾವ ರೀತಿ ಭದ್ರತೆ ಕೊಡ್ತಾರೆ ಹೇಗೆ ಇರುತ್ತೆ ಅಂತ ತಿಳಿದುಕೊಂಡಿದ್ದಾರೆ.
-masthmagaa.com
Contact Us for Advertisement