masthmagaa.com:
ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರೋ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ಕೊಟ್ಟಿದೆ. ಬಳ್ಳಾರಿಗೆ ಭೇಟಿ ನೀಡುವಾಗ ಆಂಧ್ರದ ಕಡಪ, ಅನಂತಪುರ ಎಸ್ಪಿಗಳಿಗೆ ಮಾಹಿತಿ ನೀಡಬೇಕು ಅಂತ ತಿಳಿಸಿದೆ. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಪಾಲಾಗಿದ್ದ ರೆಡ್ಡಿಗೆ ಸುಪ್ರೀಂಕೋರ್ಟ್ 2015ರಲ್ಲಿ ಜಾಮೀನು ನೀಡಿತ್ತು. ಜೊತೆಗೆ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧಿಸಿತ್ತು. ಬಳ್ಳಾರಿಗೆ ಹೋಗಲು ಅನುಮತಿ ನೀಡದಂತೆ ಸಿಬಿಐ ವಾದಿಸುತ್ತಾ ಬಂದಿತ್ತು. ಈ ಪ್ರಕರಣದ 47 ಸಾಕ್ಷಿಗಳು ಬಳ್ಳಾರಿಯಲ್ಲಿದ್ದಾರೆ. ಅವರಿಗೆ ಬೆದರಿಕೆ ಇದೆ ಅಂತ ಸಿಬಿಐ ಹೇಳಿತ್ತು. ಆದ್ರೆ ಪುತ್ರಿಯ ಮದುವೆ ಹಾಗೂ ಇತರ ಸಂದರ್ಭಗಳಲ್ಲಿ ಪ್ರವೇಶಕ್ಕೆ ಅನುಮತಿ ನೀಡಿತ್ತು. ಇದೀಗ ಕೋರ್ಟ್ 8 ವಾರಗಳ ಅನುಮತಿ ನೀಡಿದೆ.
-masthmagaa.com
Contact Us for Advertisement