ಜನಾರ್ಧನ ರೆಡ್ಡಿ ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ!

masthmagaa.com:

ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರೋ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ಕೊಟ್ಟಿದೆ. ಬಳ್ಳಾರಿಗೆ ಭೇಟಿ ನೀಡುವಾಗ ಆಂಧ್ರದ ಕಡಪ, ಅನಂತಪುರ ಎಸ್​​ಪಿಗಳಿಗೆ ಮಾಹಿತಿ ನೀಡಬೇಕು ಅಂತ ತಿಳಿಸಿದೆ. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಪಾಲಾಗಿದ್ದ ರೆಡ್ಡಿಗೆ ಸುಪ್ರೀಂಕೋರ್ಟ್​ 2015ರಲ್ಲಿ ಜಾಮೀನು ನೀಡಿತ್ತು. ಜೊತೆಗೆ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧಿಸಿತ್ತು. ಬಳ್ಳಾರಿಗೆ ಹೋಗಲು ಅನುಮತಿ ನೀಡದಂತೆ ಸಿಬಿಐ ವಾದಿಸುತ್ತಾ ಬಂದಿತ್ತು. ಈ ಪ್ರಕರಣದ 47 ಸಾಕ್ಷಿಗಳು ಬಳ್ಳಾರಿಯಲ್ಲಿದ್ದಾರೆ. ಅವರಿಗೆ ಬೆದರಿಕೆ ಇದೆ ಅಂತ ಸಿಬಿಐ ಹೇಳಿತ್ತು. ಆದ್ರೆ ಪುತ್ರಿಯ ಮದುವೆ ಹಾಗೂ ಇತರ‌‌ ಸಂದರ್ಭಗಳಲ್ಲಿ ಪ್ರವೇಶಕ್ಕೆ‌ ಅನುಮತಿ ನೀಡಿತ್ತು. ಇದೀಗ ಕೋರ್ಟ್ 8 ವಾರಗಳ ಅನುಮತಿ ನೀಡಿದೆ.

-masthmagaa.com

Contact Us for Advertisement

Leave a Reply