masthmagaa.com:
ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಮಸೂದೆಯೊಂದನ್ನ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ವಾಪಾಸ್ ಕಳುಹಿಸಿದ್ದಾರೆ. ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿರೊ ಶ್ರೀಮಂತ ದೇವಾಲಯಗಳಲ್ಲಿ ಸಂಗ್ರಹವಾಗೊ ಸಾಮಾನ್ಯ ಸಂಗ್ರಹ ನಿಧಿಯನ್ನ ಆದಾಯ ಇಲ್ದೇ ಇರೊ ಸಿ ವರ್ಗದ ದೇವಾಲಯಗಳಿಗೆ ಬಳಸೋದನ್ನ ಕಡ್ಡಾಯಗೊಳಿಸೊ ಮಸೂದೆ ಇದಾಗಿತ್ತು. ಈಗ ಈ ಮಸೂದೆಯನ್ನೆ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಸರ್ಕಾರಕ್ಕೆ ವಾಪಾಸ್ ಕಳಿಸಿದ್ದಾರೆ. ಅಲ್ದೇ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಇತರೆ ಧಾರ್ಮಿಕ ಸಂಸ್ಥೆಗಳನ್ನ ಸೇರಿಸೊ ಪ್ಲ್ಯಾನ್ ಏನಾದ್ರೂ ಇದಿಯಾ, ಅಂತ ಮಸೂದೆ ಮಾಡೊ ಪರಿಕಲ್ಪನೆ ಇದಿಯಾ? ಅಂತ ಸರ್ಕಾರಕ್ಕೆ ರಾಜ್ಯಪಾಲರು ಪ್ರಶ್ನೆ ಮಾಡಿದ್ದಾರೆ.
-masthmagaa.com
Contact Us for Advertisement