masthmagaa.com:
ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ನಡೆಸಿ ಸಿಕ್ಕಿಬಿದ್ದಿರುವ 5 ಜನ ಶಂಕಿತ ಉಗ್ರರಿಗೆ ಜೈಲಿನಲ್ಲೇ ತರಬೇತಿ ನೀಡಿದ್ದ ಎನ್ನಲಾದ ಆರೋಪಿ ನಜೀರ್ಗೆ ಜೈಲಿನ ಇತರ ಕೈದಿಗಳು ತರಾಟೆಗೆ ತೆಗದುಕೊಂಡಿದ್ದಾರೆ. ನಜೀರ್ನನ್ನ ವಿಚಾರಣೆಗೆ ಕರೆದುಕೊಂಡು ಹೋಗುವ ವೇಳೆ ಆತನನ್ನ ತಡೆದಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಇತರ ಕೈದಿಗಳು ʻನೀನು ದೇಶದ್ರೋಹಿ, ನಿನ್ನಿಂದಲೇ ಜೈಲಿನ ವಾತಾವರಣ ಹದಗೆಟ್ಟಿದೆ’ ಅಂತ ಹಿಗ್ಗಾಮುಗ್ಗ ಬೈದಿದ್ದಲ್ದೆ ಹಲ್ಲೆಗೂ ಮುಂದಾಗಿದ್ದರು. ನಂತರ ಜೈಲು ಸಿಬ್ಬಂದಿ ಆತನನ್ನು ರಕ್ಷಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
-masthmagaa.com
Contact Us for Advertisement