ಚುನಾವಣೆ ಸೋತಿದ್ದಕ್ಕೆ ಮನೆ ವಾಸ್ತು ಬದಲಾವಣೆಗೆ ಮುಂದಾದ KCR!

masthmagaa.com:

ಕಳೆದ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ಸೋತಿದ್ದಕ್ಕೆ ತೆಲಂಗಾಣ ಮಾಜಿ ಸಿಎಂ ಚಂದ್ರಶೇಖರ್‌ರಾವ್‌ ಇದೀಗ ಪರಿಹಾರ ಕಂಡುಕೊಂಡಿದ್ದಾರೆ. BRS ಪಕ್ಷದ ನಾಯಕರು ಒಬ್ರಾದ್ಮೇಲೊಬ್ರು ಪಕ್ಷ ಬಿಡ್ತಿದ್ರು. ಇದ್ರಿಂದ ಕಂಗೆಟ್ಟ KCR ಈಗ ತಮ್ಮ ನಿವಾಸ, ಕಮ್‌ ಆಫೀಸ್…‌ ತೆಲಂಗಾಣ ಭವನದ ವಾಸ್ತು ಬದಲಿಸೋಕೆ ಮುಂದಾಗಿದ್ದಾರೆ. ಭವನದ ವಾಸ್ತು ಸರಿ ಮಾಡಿ ಪಕ್ಷದ ಅದೃಷ್ಟ ಬದಲಾಯಿಸೋಕೆ KCR ಮುಂದಾಗಿದ್ದಾರೆ. 2014, 17ರಲ್ಲಿ ಇದೇ ರೀತಿ ವಾಸ್ತು ಬದಲಿಸಿದ್ರು. ಈಗ ಮತ್ತೊಮ್ಮೆ ಗ್ರಹಗತಿಗಳನ್ನ ಸರಿ ಮಾಡೋಕೆ ಹೊರಟಿದ್ದಾರೆ.

-masthmagaa.com

Contact Us for Advertisement

Leave a Reply