masthmagaa.com:
ಕೇರಳದಲ್ಲಿ ಕಾಂಗ್ರೆಸ್ ರ್ಯಾಲಿ ವೇಳೆ ರಾಷ್ಟ್ರಗೀತೆಗೆ ಅವಮಾನ ಕುರಿತ ವಿಚಾರವಾಗಿ ಬಿಜೆಪಿ ದೂರು ದಾಖಲಿಸಿದೆ. ಫೆಬ್ರುವರಿ 29 ರಂದು ತ್ರಿವೆಂಡ್ರಮ್ ಸಮರಾಗ್ನಿ ಅನ್ನೊ ಕಾಂಗ್ರೆಸ್ ಕಾರ್ಯಕ್ರಮ ನಡೆದಿತ್ತು. ಈ ವೇಳೆ ತ್ರಿವೆಂಡ್ರಮ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಾಲೊಡೆ ರವಿ ಸರಿಯಾಗಿ ರಾಷ್ಟ್ರಗೀತೆ ಹಾಡದೇ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಅಂತ ಬಿಜೆಪಿ ಪೋಲಿಸ್ರಿಗೆ ದೂರು ನೀಡಿದೆ. ಈ ಬಗೆಗಿನ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಪಕ್ಷ, ಉದ್ದೇಶಪೂರ್ವಕವಾಗಿ ಬೇಕಂತ ಯಾರು ಹೀಗೆ ಮಾಡಿಲ್ಲ. ಕಾರ್ಯಕ್ರಮದ ತರಾತುರಿಯಲ್ಲಿ ಈ ಘಟನೆ ನಡೆಸಿದೆ. ಹೀಗಾಗಿ ಇದನ್ನ ಮುಂದುವರೆಸ ಬೇಡಿ ಅಂತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
-masthmagaa.com
Contact Us for Advertisement