ಯುಎಇನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ್ದ ಭಾರತೀಯನಿಗೆ ಕ್ಷಮಾದಾನ!

masthmagaa.com:

ಯುಎಇನಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಕ್ಷಮಾದಾನ ಪಡೆದು ವಾಪಸ್ಸಾಗಿದ್ಧಾರೆ. ಕೇರಳ ಮೂಲದ 45 ವರ್ಷದ ಕೃಷ್ಣನ್ 2012ರಲ್ಲಿ ಯುಎಇನಲ್ಲಿ ಡ್ರೈವಿಂಗ್ ಮಾಡುವಾಗ ಯುವಕನೊಬ್ಬ ಸಾವನ್ನಪ್ಪಿದ್ದ. ಇಷ್ಟು ವರ್ಷ ಜೈಲಿನಲ್ಲೇ ಇದ್ದ ಕೃಷ್ಣನ್​​​ಗೆ ಯುಎಇ ಸುಪ್ರೀಂಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇತ್ತೀಚೆಗೆ ಕೃಷ್ಣನ್ ಕುಟುಂಬದವರು ಯುಎಇನಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಮತ್ತು ಲುಲು ಗ್ರೂಪ್​​​​ನ ಮುಖ್ಯಸ್ಥ ಎಂಎ ಯೂಸೂಫಲಿ ಬಳಿ ಸಹಾಯ ಯಾಚಿಸಿದ್ರು. ಯೂಸುಫಲಿ ಮೃತ ಬಾಲಕನ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಿ, ಕೃಷ್ಣನ್​​ಗೆ ಕ್ಷಮಾದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಈಗ ಎಲ್ಲಾ ಫಾರ್ಮಾಲಿಟೀಸ್​​ ಮುಗಿಸಿ ಕೇರಳದ ತಮ್ಮ ಮನೆಗೆ ಬಂದಿದ್ದಾರೆ.

-masthmagaa.com

Contact Us for Advertisement

Leave a Reply