masthmagaa.com:
ಯುಎಇನಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಕ್ಷಮಾದಾನ ಪಡೆದು ವಾಪಸ್ಸಾಗಿದ್ಧಾರೆ. ಕೇರಳ ಮೂಲದ 45 ವರ್ಷದ ಕೃಷ್ಣನ್ 2012ರಲ್ಲಿ ಯುಎಇನಲ್ಲಿ ಡ್ರೈವಿಂಗ್ ಮಾಡುವಾಗ ಯುವಕನೊಬ್ಬ ಸಾವನ್ನಪ್ಪಿದ್ದ. ಇಷ್ಟು ವರ್ಷ ಜೈಲಿನಲ್ಲೇ ಇದ್ದ ಕೃಷ್ಣನ್ಗೆ ಯುಎಇ ಸುಪ್ರೀಂಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇತ್ತೀಚೆಗೆ ಕೃಷ್ಣನ್ ಕುಟುಂಬದವರು ಯುಎಇನಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಮತ್ತು ಲುಲು ಗ್ರೂಪ್ನ ಮುಖ್ಯಸ್ಥ ಎಂಎ ಯೂಸೂಫಲಿ ಬಳಿ ಸಹಾಯ ಯಾಚಿಸಿದ್ರು. ಯೂಸುಫಲಿ ಮೃತ ಬಾಲಕನ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಿ, ಕೃಷ್ಣನ್ಗೆ ಕ್ಷಮಾದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಈಗ ಎಲ್ಲಾ ಫಾರ್ಮಾಲಿಟೀಸ್ ಮುಗಿಸಿ ಕೇರಳದ ತಮ್ಮ ಮನೆಗೆ ಬಂದಿದ್ದಾರೆ.
-masthmagaa.com
Contact Us for Advertisement