masthmagaa.com:
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವೇರುತ್ತಿರೋ ಹೊತ್ತಲ್ಲೇ ಮತ್ತೊಂದು ಧ್ವಜ ವಿವಾದ ನಡೆಯೋ ಸಾಧ್ಯತೆ ದಟ್ಟವಾಗ್ತಿದೆ. ಮನೆಗಳ ಮೇಲೆ ಹಾಕಲಾಗಿದ್ದ ಕೇಸರಿ ಧ್ವಜ ಹಾಗೂ ಶ್ರೀರಾಮರ ಫ್ಲೆಕ್ಸ್ಗಳನ್ನ ತಿಪ್ಪೆ ಮತ್ತು ಸ್ಮಶಾನಕ್ಕೆ ಎಸೆಯಲಾಗಿದೆ. ಕೋಲಾರದಲ್ಲಿ ಘಟನೆ ನಡೆದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ರಿಂದ ಕೋಲಾರದ ಅಡ್ಡಗಲ್ ಗ್ರಾಮ ಪಂಚಾಯತಿ ಈ ರೀತಿ ಮಾಡಿದೆ. ಇನ್ನು ಪಂಚಾಯತಿ ನಡೆಗೆ ಆಕ್ರೋಶ ಹೊರಹಾಕಿರೊ ಗ್ರಾಮಸ್ಥರು ರಸ್ತೆ ಮಧ್ಯದಲ್ಲೆ ಪ್ರತಿಭಟನೆ ನಡೆಸಿದ್ದಾರೆ. ಅಲ್ದೇ ʻʻನಾವೇನು ಯಾವುದೇ ರಾಜಕೀಯ ಹಾಗೂ ರಾಜಕಾರಣಿಗಳ ಫ್ಲೆಕ್ಸ್ ಹಾಕಿಲ್ಲ” ಅಂತೇಳಿ ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಪೋಲಿಸರು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
-masthmagaa.com
Contact Us for Advertisement