ನಿಜ್ಜರ್‌ ಕೇಸ್: ಕೋರ್ಟ್‌ ಮುಂದೆ ಖಲಿಸ್ತಾನಿ ಧ್ವಜ ಹಿಡಿದು ಸ್ಟ್ರೈಕ್‌!

masthmagaa.com:

ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಮೂವರು ಆರೋಪಿಗಳನ್ನ ಕೆನಡಾ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಆರೋಪಿಗಳನ್ನ ಕೆನಡಾ ಕೋರ್ಟ್‌ಗೆ ಹಾಜರುಪಡಿಸ್ತಿದ್ದಂತೆ ಕೋರ್ಟ್‌ ಆವರಣದಲ್ಲಿ ಖಲಿಸ್ತಾನಿ ಧ್ವಜಗಳನ್ನ ಹಿಡಿದು ನೂರಾರು ಜನ ಹರ್ದೀಪ್‌ ಹತ್ಯೆಗೆ ನ್ಯಾಯಕೊಡಿಸುವಂತೆ ಕೆನಡಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇನ್ನು ಈ ಕೇಸ್‌ನ ವಿಚಾರಣೆಯನ್ನ ಕೋರ್ಟ್‌ ಮೇ 21ಕ್ಕೆ ಮುಂದೂಡಿದೆ.

-masthmagaa.com

Contact Us for Advertisement

Leave a Reply