masthmagaa.com:
ಪಕ್ಷೇತರ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಮಾತಿನ ಸಮರ ಮುಂದುವರಿದಿದೆ. ಇವತ್ತು ಕೆಆರ್ಎಸ್ ಡ್ಯಾಂಗೆ ಭೇಟಿ ನೀಡಿ ಮಾತನಾಡಿದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ಸುಮಲತಾರದ್ದು ನಟೋರಿಯಸ್ ನಡವಳಿಕೆ. ದೇಶದ್ರೋಹಿ ಅನ್ನೋದನ್ನ ಅವರು ಸಾಬೀತುಪಡಿಸುತ್ತಿದ್ದಾರೆ. ಅಂಬರೀಶ್ ಸಂಸದರಾಗಿದ್ದಾಗಲೇ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆದಿತ್ತು. ಅದರ ಹೊಣೆ ಹೊತ್ತು ಸುಮಲತಾ ರಾಜೀನಾಮೆ ನೀಡ್ಬೇಕು. ಕೆಆರ್ಎಸ್ ಡ್ಯಾಂನಲ್ಲಿ ಸಣ್ಣ ಬಿರುಕು ಕೂಡ ಕಾಣಿಸಿಲ್ಲ. ನಮಗೆ ಕಾಣಿಸದ ಬಿರುಕು ಅವರಿಗೆ ಎಲ್ಲಿ ಕಾಣಿಸ್ತೋ ಗೊತ್ತಿಲ್ಲ ಅಂತ ಹೇಳಿದ್ದಾರೆ. ಮತ್ತೊಬ್ಬ ಜೆಡಿಎಸ್ ಶಾಸಕ ಅನ್ನದಾನಿ ಕೂಡ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಅಧಿಕಾರಿಗಳ ಜೊತೆ ನಾನು ಮಾತಾಡಿದ್ದೀನಿ. ಡ್ಯಾಂನಲ್ಲಿ ಏನೂ ಬಿರುಕು ಬಿಟ್ಟಿಲ್ಲ. ಈ ಹಿಂದೆಯೂ ನೆಪಗಳನ್ನ ಹೇಳಿ ಅಡ್ಡಿಪಡಿಸಿದ್ರು ಅಂತ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೆಲ್ಲದರ ಬಗ್ಗೆ ಇವತ್ತು ಪ್ರತಿಕ್ರಿಯಿಸಿರೋ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ, ಇಂಥಾ ಹೊಲಸು ರಾಜಕಾರಣ ಮಾಡೋರ ಬಾಯಲ್ಲಿ ಅಂಬರೀಶ್ ಹೆಸರು ಬರಬಾರದು. ಅಂಬರೀಶ್ ಕಾಲದಲ್ಲಿ ಅಕ್ರಮ ನಡೀತಿತ್ತು ಅಂಥಾದ್ರೆ ಹೋಗಿ ಅದನ್ನ ನಿಲ್ಲಿಸಬೇಕಿತ್ತು. ಭಯ ಬಿದ್ದಾಗ ಇಂಥಾ ಹುಚ್ಚುಚ್ಚು ಹೇಳಿಕೆಗಳನ್ನ ಕೊಡೋದು ಸಹಜ. ಇವರು ಏನೆಲ್ಲಾ ಮಾಡ್ತಾರೆ ಅನ್ನೋದನ್ನ ಹೇಳಿದ್ರೆ ಶೇಕ್ ಆಗಿ ಹೋಗ್ತಾರೆ. ರೋಹಿಣಿ ಸಿಂಧೂರಿಯಂಥ ನಿಷ್ಠಾವಂತ ಅಧಿಕಾರಿಯನ್ನೇ ವರ್ಗಾವಣೆ ಮಾಡಿದ್ದೀರ. ಮಹಿಳೆಯರು ಉನ್ನತ ಹುದ್ದೆಯಲ್ಲಿರೋದು ಇವರಿಗೆ ಜೀರ್ಣಿಸಿಕೊಳ್ಳೋಕೆ ಆಗ್ತಿಲ್ಲ ಅಂತ ಸುಮಲತಾ ಕಿಡಿಕಾರಿದ್ದಾರೆ.
-masthmagaa.com
Contact Us for Advertisement