masthmagaa.com:
4 ಸಾವಿರದಷ್ಟು ಸಿವಿಲ್ ಸರ್ವೆಂಟ್ಸ್ ಬಿಜೆಪಿ ಕಾರ್ಯಕರ್ತರೆ ಇದ್ದಾರೆ ಅಂತ ಮಾಜಿ ಸಿ ಎಂ ಹೆಚ್ ಡಿ ಕುಮಾರ ಸ್ವಾಮಿ ಹೇಳಿದ್ದಾರೆ. ರಾಮನಗರದ ಬಿಡದಿ ಸಮೀಪ ಕೇತಗಾನ ಹಳ್ಳಿ ತೋಟದ ಮನೆಯಲ್ಲಿ ನಡೆದ ಜೆಡಿ ಎಸ್ ಕಾರ್ಯಗಾರದಲ್ಲಿ ಕುಮಾರ ಸ್ವಾಮಿ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಅಂದ್ರೆ ಆರ್ ಎಸ್ ಎಸ್ ಕಾರ್ಯ ಕರ್ತರು. ದೇಶದೆಲ್ಲೆಡೆ 4 ಸಾವಿರದಷ್ಟು ಬಿಜೆಪಿ ಕಾರ್ಯಕರ್ತರೆ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಆರ್ ಎಸ್ ಎಸ್ ಅಜೆಂಡಾ ಇಂಪ್ಲಿಮೆಂಟ್ ಮಾಡಲು ತರಬೇತಿ ಕೊಡ್ತ ಇದ್ದಾರೆ. 2016ರ ಒಂದು ವರ್ಷದಲ್ಲಿ 676 ಆರ್ ಎಸ್ ಎಸ್ ಕಾರ್ಯಕರ್ತರು ಪಾಸ್ ಆಗಿದ್ದಾರೆ. ಇದೆಲ್ಲ ಮಾಹಿತಿ ನಾನು ಹೇಳಿರೋದಲ್ಲ ನನಗೆ ಇದೆಲ್ಲ ಮಾಹಿತಿ ದೊರೆತಿದ್ದು ಆರ್ ಎಸ್ ಎಸ್ನಿಂದಲೇ ಅಂತ ಕುಮಾರ ಸ್ವಾಮಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಉತ್ತರ ಪ್ರದೇಶ ಸರ್ಕಾರ ಆರ್ ಎಸ್ ಎಸ್ ಹಿಡಿತದಲ್ಲಿದೆ. ಮನುಸ್ಮೃತಿ ಯುಗಕ್ಕೆ ಕರೆದೊಯ್ಯುವುದು ಆರ್ ಎಸ್ ಎಸ್ ಅಜೆಂಡಾ. ನಾವೂ ಹಿಂದೂಗಳು, ಆದ್ರೆ ಹಿಂದುತ್ವ ನಮ್ಮ ಅಜೆಂಡ ಅಲ್ಲ ಅಂತ ಕುಮಾರ ಸ್ವಾಮಿ ಪ್ರಶ್ನಿಸಿದ್ದಾರೆ.
-masthmagaa.com
Contact Us for Advertisement