masthmagaa.com:
ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನಡುವಿನ ಮಾತಿನ ಸಮರ ಸ್ವಲ್ಪ ತಣ್ಣಗಾದ್ರೂ, ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸುಮಲತಾ ಸಾರಿರೋ ಸಮರ ತಣ್ಣಗಾಗಿಲ್ಲ. ನಾಳೆ ವಿವಾದಿತ ಬೇಬಿ ಬೆಟ್ಟಕ್ಕೆ ಭೇಟಿ ನೀಡಲಿರೋ ಅವರು ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಜೊತೆಗೆ ಕೆಆರ್ಎಸ್ ಅಣೆಕಟ್ಟಿನ ಸುರಕ್ಷತೆ ಸಂಬಂಧವೂ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಇನ್ನು ಸುಮಲತಾ ತನ್ನನ್ನ ಕರೆದ್ರೆ ಕ್ಷೇತ್ರದ ಶಾಸಕನಾಗಿ ಬೇಬಿ ಬೆಟ್ಟಕ್ಕೆ ಹೋಗಲು ಸಿದ್ಧನಿದ್ದೇನೆ ಅಂತ ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು ಹೇಳಿದ್ದಾರೆ.
-masthmagaa.com
Contact Us for Advertisement