ವಿಪಕ್ಷ ನಾಯಕನ ಸ್ಥಾನ ಪುಟಗೋಸಿ ಅಂತೆ! ಛೆ.. ಎಂತಾ ಮಾತು!

masthmagaa.com:

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪುಟಗೋಸಿ ವಿಪಕ್ಷ ನಾಯಕನ ಸ್ಥಾನ ಗಿಟ್ಟಿಸಿಕೊಳ್ಳಲು ಸಿದ್ದರಾಮಯ್ಯ ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಸರ್ಕಾರವನ್ನೇ ಬೀಳಿಸಿದ್ರು ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕಾಗಿ ಯಾವ ಪಕ್ಷಕ್ಕಾದ್ರೂ ಹೋಗ್ತಾರೆ. ಜೆಡಿಎಸ್​ನಲ್ಲಿ ಇದ್ದಿದ್ರೆ ಸಿಎಂ ಆಗಕ್ಕಾಗಲ್ಲ ಅನ್ಕೊಂಡು ಕಾಂಗ್ರೆಸ್​ಗೆ ಹೋದ್ರು. ಮೈತ್ರಿ ಸರ್ಕಾರದಲ್ಲಿ ನನ್ನ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ನಿಮ್ಮ ಪಕ್ಷದಲ್ಲಿದ್ದ 23 ಶಾಸಕರನ್ನ ಬೀದಿಗೆ ತಂದು ನಿಲ್ಸಿದ್ಯಲಪ್ಪಾ ಅಂತ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ರು. ಇನ್ನು ಯಡಿಯೂರಪ್ಪ ಆಪ್ತನ ಮೇಲೆ ಇತ್ತೀಚೆಗೆ ಐಟಿ ದಾಳಿ ನಡೆದಿದ್ದು ರಾಜಕೀಯ ಪ್ರೇರಿತ. ಆ ದಾಳಿಗೆ ಸಿದ್ದರಾಮಯ್ಯನೇ ಮೂಲ ಕಾರಣ. ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಮಧ್ಯರಾತ್ರಿ ಭೇಟಿಯಾಗಿ ರಾಜ್ಯ ರಾಜಕೀಯದ ಮುಂದಿನ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಯಡಿಯೂರಪ್ಪರನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳೋಕೆ ಕೇಂದ್ರದಿಂದ ಐಟಿ ರೈಡ್ ಮಾಡಿಸಲಾಗಿದೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply