ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಡಿಸಿಎಂ ಆಗಿ, ಸಚಿವರೂ ಆಗಿರೋ ಲಕ್ಷ್ಮಣ್ ಸವದಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೊಟ್ಟಿದ್ದಾರೆ. ಇವತ್ತು ಚಿಕ್ಕೋಡಿಯ ಕೃಷ್ಣಾನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಲಕ್ಷ್ಮಣ್ ಸವದಿ ಭೇಟಿ ನೀಡಿದ್ದರು. ಈ ವೇಳೆ ಫೋನ್ನಲ್ಲಿ ಮಾತನಾಡುತ್ತಿದ್ದ ಅವರು, ಮಹೇಶ್ ಕುಮಟಳ್ಳಿಯಂತಹ ದರಿದ್ರ ಮಕ್ಕಳ ಬಗ್ಗೆ ನನ್ನ ಹತ್ರ ಮಾತನಾಡಬೇಡಿ. ಅವನ ಸುದ್ದಿ ಪಡೆದು ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದು ನಾಲಗೆ ಹರಿಬಿಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ, ಈ ಬಗ್ಗೆ ನಾನು ಯಾರಿಗೂ ದೂರು ನೀಡಲ್ಲ. ದೇವರಿದ್ದಾನೆ. ತಾಯಿಯ ಬಗ್ಗೆ ಮಾತನಾಡಿದ್ದು ಬೇಸರವಾಯ್ತು ಎಂದಿದ್ದಾರೆ.
Contact Us for Advertisement