ಡಿಸಿಎಂ ಲಕ್ಷ್ಮಣ್ ಸವದಿ ಬಾಯಲ್ಲಿ ಇದೆಂಥಾ ಮಾತು..? ಛೇ…

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಡಿಸಿಎಂ ಆಗಿ, ಸಚಿವರೂ ಆಗಿರೋ ಲಕ್ಷ್ಮಣ್ ಸವದಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೊಟ್ಟಿದ್ದಾರೆ. ಇವತ್ತು ಚಿಕ್ಕೋಡಿಯ ಕೃಷ್ಣಾನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಲಕ್ಷ್ಮಣ್ ಸವದಿ ಭೇಟಿ ನೀಡಿದ್ದರು. ಈ ವೇಳೆ ಫೋನ್‍ನಲ್ಲಿ ಮಾತನಾಡುತ್ತಿದ್ದ ಅವರು, ಮಹೇಶ್ ಕುಮಟಳ್ಳಿಯಂತಹ ದರಿದ್ರ ಮಕ್ಕಳ ಬಗ್ಗೆ ನನ್ನ ಹತ್ರ ಮಾತನಾಡಬೇಡಿ. ಅವನ ಸುದ್ದಿ ಪಡೆದು ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದು ನಾಲಗೆ ಹರಿಬಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ, ಈ ಬಗ್ಗೆ ನಾನು ಯಾರಿಗೂ ದೂರು ನೀಡಲ್ಲ. ದೇವರಿದ್ದಾನೆ. ತಾಯಿಯ ಬಗ್ಗೆ ಮಾತನಾಡಿದ್ದು ಬೇಸರವಾಯ್ತು ಎಂದಿದ್ದಾರೆ.

Contact Us for Advertisement

Leave a Reply