masthmagaa.com:
ವರ್ಷದ ಕೊನೇ ದಿನವಾದ ಇವತ್ತು ಪ್ರಧಾನಿ ಮೋದಿ ಗುಜರಾತ್ನ ರಾಜ್ಕೋಟ್ನಲ್ಲಿ ಏಮ್ಸ್ ಆಸ್ಪತ್ರೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದ್ರು. ಬಳಿಕ ಮಾತನಾಡಿದ ಅವರು, ಈ ವರ್ಷದ ಕೊನೇ ದಿನವಾದ ಇವತ್ತು ದೇಶದ ಲಕ್ಷಾಂತರ ವೈದ್ಯರು, ಹೆಲ್ತ್ ವಾರಿಯರ್ಸ್, ಸ್ವಚ್ಛತಾಕರ್ಮಿಗಳು, ಮೆಡಿಕಲ್ಗಳಲ್ಲಿ ಕೆಲಸ ಮಾಡೋರು ಹಾಗೂ ಇತರೆ ಫ್ರಂಟ್ಲೈನ್ ಕೊರೋನಾ ವಾರಿಯರ್ಗಳನ್ನ ನೆನೆಯುವ ದಿನವಾಗಿದೆ. ಕೊರೋನಾ ವಿರುದ್ಧದ ಹೋರಾಟದ ವೇಳೆ ಪ್ರಾಣ ಕಳೆದುಕೊಂಡವರಿಗೆ ನಾನು ನಮಿಸುತ್ತೇನೆ. ಆರೋಗ್ಯವೇ ಸಂಪತ್ತು ಅನ್ನೋದನ್ನ 2020 ಚೆನ್ನಾಗಿ ಅರ್ಥ ಮಾಡಿಸಿದೆ. ಈ ವರ್ಷ ಬರೀ ಚಾಲೆಂಜ್ಗಳಿಂದ ತುಂಬಿ ಹೋಗಿತ್ತು. ಈಗ ದೇಶದಲ್ಲಿ ಕೊರೋನಾ ಕೇಸಸ್ ಕಮ್ಮಿಯಾಗ್ತಿದೆ. ನಾವು ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಪ್ರೋಗ್ರಾಂಗೆ ರೆಡಿಯಾಗ್ತಿದ್ದೇವೆ. ‘ಕೊರೋನಾಗೆ ಲಸಿಕೆ ಸಿಗೋವರೆಗೆ ನಿರ್ಲಕ್ಷ್ಯ ಬೇಡ’ (Dawai nahi toh dheelai nahi) ಅಂತ ಈ ಹಿಂದೆ ಹೇಳಿದ್ದೆ. ಆದ್ರೀಗ ಹೇಳ್ತಿದ್ದೀನಿ, ‘ಲಸಿಕೆ ಜೊತೆಗೆ ಎಚ್ಚರಿಕೆ ಕೂಡ ಇರಲಿ’ (Dawai bhi aur kadaai bhi). ‘ದವಾಯಿ ಬೀ ಔರ್ ಕಡಾಯಿ ಭೀ’ ಅನ್ನೋದೇ 2021ಕ್ಕೆ ನಮ್ಮ ಮಂತ್ರ. ನಮ್ಮ ದೇಶದಲ್ಲಿ ರೂಮರ್ಗಳು ತುಂಬಾ ಬೇಗ ಹರಡುತ್ತೆ. ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಥವಾ ಬೇಜವಾಬ್ದಾರಿಯಿಂದ ರೂಮರ್ಗಳನ್ನ ಹರಡುತ್ತಾರೆ. ಕೊರೋನಾ ಲಸಿಕೆಯ ಅಭಿಯಾನ ಶುರುವಾದಗಲೂ ವದಂತಿಗಳು ಹರಡಬಹುದು. ಕೆಲವೊಂದು ಆಲ್ರೆಡಿ ಹರಡಿಯಾಗಿದೆ. ಇಂತಹ ರೂಮರ್ಗಳ ಬಗ್ಗೆ ಎಚ್ಚರದಿಂದ ಇರಿ. ಜವಾಬ್ದಾರಿಯುತ ನಾಗರಿಕರಾಗಿರುವ ನೀವು ಸೋಷಿಯಲ್ ಮೀಡಿಯಾಗಳಲ್ಲಿ ಯಾವುದಾದ್ರೂ ಮೆಸೇಜ್ ಫಾರ್ವಾರ್ಡ್ ಮಾಡುವಾಗ ಅದನ್ನ ಚೆಕ್ ಮಾಡಿಕೊಳ್ಳಿ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.
-masthmagaa.com
Contact Us for Advertisement