masthmagaa.com:
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಶಾಸಕ ಲಕ್ಷ್ಮಣ ಸವದಿ ಭಾರತ ಮಾತೆಗೆ ಜೈಕಾರ ಹಾಕಿದ ವಿಚಾರ ರಾಜ್ಯದಲ್ಲೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಕಲಬುರ್ಗಿಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಲಕ್ಷ್ಮಣ ಸವದಿ ಭಾರತ ಮಾತೆಗೆ ಜೈಕಾರ ಹಾಕೊ ವೇಳೆ, ಖರ್ಗೆಯವ್ರು ತಪ್ಪು ತಿಳ್ಕೊಬಾರ್ದು ಅಂತೇಳಿರೊ ವಿಡಿಯೋ ಈಗ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ರಿಯಾಕ್ಟ್ ಮಾಡಿರೋ ಬಿಜೆಪಿ, ʻಖರ್ಗೆ ಅವ್ರ ಎದುರಲ್ಲಿ ಭಾರತ ಮಾತೆಗೆ ಜೈಕಾರ ಹಾಕೋದು ಅಪರಾಧವೇʼ ಅಂತ ಪ್ರಶ್ನಿಸಿದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ʻಇದು ಕಾಂಗ್ರೆಸ್ನಲ್ಲಿನ ಭಿನ್ನ ಸಂಸ್ಕೃತಿಯನ್ನ ತೋರಿಸುತ್ತೆ. ಭಾರತ ಮಾತೆಗೆ ಜೈಕಾರ ಹಾಕಿದ್ರೆ ಕಾಂಗ್ರೆಸ್ ಪಕ್ಷದ ವ್ಯವಸ್ಥೆಯಲ್ಲಿ ಅಪರಾಧವೇ?ʼ ಅಂತ ಪ್ರಶ್ನಿಸಿದ್ದಾರೆ.
-masthmagaa.com
Contact Us for Advertisement