“ನನ್ನನ್ನ ಬದುಕಲು ಬಿಡಿ” : ವಿವೇಕ್‌ ಅಗ್ನಿಹೋತ್ರಿ !

masthmagaa.com:

ಪ್ರಭಾಸ್‌ ನಟನೆಯ “ಸಲಾರ್‌” ಸಿನಿಮಾ ರಿಲೀಸ್‌ ಆಗೋ ಟೈಮ್‌ನಲ್ಲೇ “ದಿ ವ್ಯಾಕ್ಸಿನ್‌ ವಾರ್‌” ಮೂವಿ ರಿಲೀಸ್‌ ಮಾಡಿ ಗೆಲ್ಲುತ್ತೇನೆ ಅನ್ನೋ ಮಾತು ವಿವೇಕ್‌ ಅಗ್ನಿಹೋತ್ರಿ ಹೇಳಿದ್ರು ಅನ್ನೋ ಸುದ್ದಿ ಆಗಿತ್ತು. ಆದ್ರೆ ಈಗ ವಿವೇಕ್‌ ಅಗ್ನಹೋತ್ರಿ ಸಲಾರ್‌ ಸಿನಿಮಾಗೂ ನಮ್ಮ ಸಿನಿಮಾಗೂ ಕಂಫೇರ್‌ ಮಾಡಿಬೇಡಿ ನನ್ನನ್ನ ಬಿಟ್ಟುಬಿಡಿ ಅಂತ ಮಾಡಿರೋ ಟ್ವೀಟ್‌ ಸಖತ್‌ ವೈರಲ್‌ ಆಗ್ತಾ ಇದೆ.

ಈ ಹಿಂದೆ ದಿ ʼಕಾಶ್ಮೀರ್ ಫೈಲ್ಸ್’ ಹಾಗೂ ‘ರಾಧೆ ಶ್ಯಾಮ್’ ಮಾರ್ಚ್​ 11, 2022 ಕ್ಕೆ ರಿಲೀಸ್‌ ಆಗಿತ್ತು. ಪ್ರಭಾಸ್‌ ಅಭಿನಯದ ರಾಧೆ ಶ್ಯಾಮ ಹಿಟ್‌ ಆಗಿರಲಿಲ್ಲ, ಆದ್ರೆ ʼಕಾಶ್ಮೀರ್ ಫೈಲ್ಸ್’ ಮಾತ್ರ 250 ಕೋಟಿ ಬಾಚಿ ಸುಪರ್‌ ಹಿಟ್‌ ಆಗಿತ್ತು. ಅದೇ ತರ “ದಿ ವ್ಯಾಕ್ಸಿನ್‌ ವಾರ್‌” ಮೂವಿಯನ್ನ ʼಸಲಾರ್‌ʼ ಮೂವಿ ಜೊತೆನೇ ರಿಲೀಸ್‌ ಮಾಡಿ ಗೆಲ್ತೀನಿ ಅಂತ ವಿವೇಕ್‌ ಅಗ್ನಿಹೋತ್ರಿ ಹೇಳಿದ್ದಾರೆ ಅನ್ನೋ ಮಾತು ಎಲ್ಲಾ ಕಡೆ ವೈರಲ್‌ ಆಗಿತ್ತು. ವಿವೇಕ್‌ ಅಗ್ನಿಹೋತ್ರಿ ಅವರು ಟ್ವೀಟ್‌ ಮಾಡೋ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

“ನಾನು ಹೇಳಿದ್ದೆ ಅಂತ ಹೇಳಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಯಾರು ಹರಡುತ್ತಿದ್ದಾರೆ? ನಾನು ಪ್ರಭಾಸ್ ಅವರನ್ನು ಗೌರವಿಸುತ್ತೇನೆ. ಅವರು ಮೆಗಾ ಮೆಗಾ ಸ್ಟಾರ್. ಮೆಗಾ ಮೆಗಾ ಬಜೆಟ್ ಚಿತ್ರಗಳಲ್ಲಿ ಅವರು ನಟಿಸುತ್ತಾರೆ. ಆದರೆ, ನಮ್ಮ ಸಿನಿಮಾದಲ್ಲಿ ಸ್ಟಾರ್​ಗಳು ಇರಲ್ಲ, ಸಣ್ಣ ಬಜೆಟ್ ಸಿನಿಮಾ ಆಗಿರತ್ತೆ. ನಮ್ಮ ಸಿನಿಮಾಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ. ದಯವಿಟ್ಟು ನನ್ನನ್ನು ಬಿಡಿ” ಅಂತ ವಿವೇಕ್‌ ಅಗ್ನಿಹೋತ್ರಿ ಅವರು ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply