masthmagaa.com:
ಜನರು ಭಗವಾನ್ ಶ್ರೀರಾಮ, ಸೀತಾಮಾತೆ ಮತ್ತು ಮಹಾತ್ಮ ಗಾಂಧೀಜಿಯವರ ಸ್ಪಿರಿಟ್ನ್ನ ಅಳವಡಿಸಿಕೊಂಡು ಉತ್ತಮ ಮನುಷ್ಯರಾಗಬೇಕು ಅಂತ ನ್ಯೂಯಾರ್ಕ್ನ ಮೇಯರ್ ಎರಿಕ್ ಆಡಮ್ಸ್ ಕರೆ ಕೊಟ್ಟಿದ್ದಾರೆ. ಆಡಮ್ಸ್ ತಮ್ಮ ಮನೆಯಲ್ಲಿ ದೀಪಾವಳಿ ಆಚರಣೆ ಆಯೋಜಿಸಿದ್ದು, ಹಲವು ಭಾರತೀಯ-ಅಮೆರಿಕನ್ನರು ಆಚರಣೆಯಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ದೀಪಾವಳಿ ಕೇವಲ ಒಂದು ದಿನದ ರಜೆಯ ಹಬ್ಬವಲ್ಲ. ಬದ್ಲಾಗಿ ಕತ್ತಲೆಯನ್ನ ಓಡಿಸಿ ಬೆಳಕನ್ನ ತರುವ ಹಬ್ಬವಾಗಿದೆ. ಪ್ರಸ್ತುತ ಜಗತ್ತು ಕತ್ತಲೆಯಿಂದ ಕೂಡಿದ್ದು, ಅದನ್ನ ಓಡಿಸಿ ಬೆಳಕು ತರುವ ಕೆಲಸ ಮಾಡಬೇಕಿದೆ. ನಾವು ನಿಜವಾಗಲೂ ರಾಮಯಣ, ಹಾಗೂ ಸೀತಾದೇವಿ ಮತ್ತು ಗಾಂಧೀಜಿಯವರ ಜೀವನವನ್ನ ನಂಬೋದೆ ಆದ್ರೆ ಅವರ ಹಾದಿಯಲ್ಲಿ ಸಾಗಬೇಕು. ನಾವು ಕೇವಲ ಆರಾಧಕರಾಗಬಾರ್ದು. ಜೊತೆಗೆ ಅವರ ಹೆಜ್ಜೆಯನ್ನ ಅನುಸರಿಸಬೇಕು ಅಂತ ಆಡಮ್ಸ್ ಕರೆಕೊಟ್ಟಿದ್ದಾರೆ.
-masthmagaa.com
Contact Us for Advertisement