masthmagaa.com:
ಆರ್ ಮಾಧವನ್ ಅವರ ಪುತ್ರ ವೇದಾಂತ್ ಇತ್ತೀಚೆಗೆ ನಡೆದ ಮಲೇಷ್ಯಾ ಇನ್ವಿಟೇಶನಲ್ ಏಜ್ ಗ್ರೂಪ್ ಈಜು ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ 5 ಪದಕಗಳನ್ನು ಗೆದ್ದಿದ್ದಾರೆ. ಭಾನುವಾರ, ನಟ-ನಿರ್ದೇಶಕ ಮಾಧವನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ಮಾಧವನ್ ತಮ್ಮ ಮಗ ಮತ್ತು ಪತ್ನಿ ಸರಿತಾ ಬಿರ್ಜೆ ಅವರ ಜೊತೆಗಿನ ಈವೆಂಟ್ನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ನಟ ಸೂರ್ಯ ಮತ್ತು ನಟಿ-ರಾಜಕಾರಣಿ ಖುಶ್ಬೂ ಸುಂದರ್ ಸೇರಿದಂತೆ ಅನೇಕರು ಮಾಧವನ್ ಮತ್ತು ಸರಿತಾ ಅವರ ಮಗನ ಸಾಧನೆಗಾಗಿ ಶುಭ ಹಾರೈಸಿದ್ದಾರೆ.
ಮಾಧವನ್ ಶೇರ್ ಮಾಡಿದ ಪೋಸ್ಟ್ನಲ್ಲಿಅವರ ಮಗ ವೇದಾಂತ್ ಭಾರತದ ಧ್ವಜ ಮತ್ತು ಪದಕಗಳನ್ನ ಹಿಡಿದು ಪೋಸ್ ಕೊಟ್ಟಿದ್ದಾರೆ. ಮಾಧವನ್ ಅವರ ಪತ್ನಿ ಸರಿತಾ ಬಿರ್ಜೆ ಅವರು ವೇದಾಂತ್ ಅವರೊಂದಿಗೆ ಫೋಟೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ವೇದಾಂತ್ ಗಳಿಸಿದ ಪದಕಗಳ ಫೋಟೊ ಕೂಡ ಇತ್ತು. ಅಲ್ಲದೇ ಮಾಧವನ್ ಅವರು ಈ ಫೋಟೊಗಳಿಗೆ ಟೈಟಲ್ ಕೂಡ ಕೊಟ್ಟಿದ್ದಾರೆ, “ದೇವರ ದಯೆ ಮತ್ತು ನಿಮ್ಮೆಲ್ಲರ ಶುಭ ಹಾರೈಕೆಗಳೊಂದಿಗೆ ವೇದಾಂತ್ 2023ರ ಮಲೇಷಿಯಾದಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ 5 ಚಿನ್ನದ ಪದಕವನ್ನ ತಂದಿದ್ದಾನೆ. 50 ಮೀ, 100 ಮೀ, 200 ಮೀ, 400 ಮೀ ಮತ್ತು 1500 ಮೀ ಸ್ಟಿಮ್ಮಿಂಗ್ ಕಾಂಪಿಟೇಷನ್ನಲ್ಲಿ ಈ ಪದಕಗಳನ್ನ ಪಡೆದಿದ್ದಾನೆ. ಇವನ ಕೋಚ್ ಪ್ರದೀಪ್ ಸರ್ಗೆ ತುಂಬಾ ಥ್ಯಾಂಕ್ಸ್ ” ಅಂತ ಬರೆದುಕೊಂಡಿದ್ದಾರೆ.
-masthmagaa.com
Contact Us for Advertisement