ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಜೋಡಿ ಮತ್ತೆ ಅಧಿಕಾರಕ್ಕೆ ಏರಿದೆ. ಅದ್ರ ಬೆನ್ನಲ್ಲೇ ಕಾರ್ಟೂನ್ ಒಂದು ವೈರಲ್ ಆಗಿದೆ. ಶಿವಸೇನೆಯ ಸಂಜಯ್ ರಾವತ್ ಇಂದು ಬೆಳಗ್ಗೆ ಶೇರ್ ಮಾಡಿರೋ ಈ ಕಾರ್ಟೂರ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕಾರ್ಟೂನ್ನಲ್ಲಿ ಸಿಂಹವೊಂದು ಕುತ್ತಿಗೆಗೆ ಗಡಿಯಾರ ನೇತುಹಾಕೊಂಡಿದ್ದು, ಕೈಯಲ್ಲಿ ಕಮಲ ಹಿಡಿದಿದೆ. ಅಂದ್ರೆ ಇಲ್ಲಿ ಹುಲಿ ಶಿವಸೇನೆಯ ಗುರುತಾಗಿದ್ದು, ಕಮಲ ಬಿಜೆಪಿಯ ಗುರುತಾಗಿದೆ. ಇನ್ನು ಗಡಿಯಾರ ಎನ್ಸಿಪಿಯ ಗುರುತಾಗಿದೆ. ಇದರ ಅರ್ಥ ಶಿವಸೇನೆಗೆ ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯವಾಗದಿದ್ರೆ, ಎನ್ಸಿಪಿ ಕೂಡ ಶಿವಸೇನೆ ಬೆಂಬಲಕ್ಕಿದೆ ಅನ್ನೋದಾಗಿದೆ. ಈ ವ್ಯಂಗ್ಯ ಚಿತ್ರ ಟ್ವಿಟ್ಟರ್ನಲ್ಲಿ ಹಾಕಿರುವ ಸಂಜಯ್ ರಾವತ್, ತುಂಬಾ ಅದ್ಭುತವಾದ ವ್ಯಂಗ್ಯ ಚಿತ್ರ. ಟೆನ್ಶನ್ ಮಾಡ್ಕೋಬೇಡಿ ದೀಪಾವಳಿ ಇದೆ ಅಂತ ಬರೆದುಕೊಂಡಿದ್ದಾರೆ.
व्यंग चित्रकाराची कमाल!
बुरा न मानो दिवाली है.. pic.twitter.com/krj2QAnGmB— Sanjay Raut (@rautsanjay61) October 25, 2019
Contact Us for Advertisement