ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೋಡಿ…ವ್ಯಂಗ್ಯ ಚಿತ್ರ ವೈರಲ್

ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಜೋಡಿ ಮತ್ತೆ ಅಧಿಕಾರಕ್ಕೆ ಏರಿದೆ. ಅದ್ರ ಬೆನ್ನಲ್ಲೇ ಕಾರ್ಟೂನ್ ಒಂದು ವೈರಲ್ ಆಗಿದೆ. ಶಿವಸೇನೆಯ ಸಂಜಯ್ ರಾವತ್ ಇಂದು ಬೆಳಗ್ಗೆ ಶೇರ್ ಮಾಡಿರೋ ಈ ಕಾರ್ಟೂರ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕಾರ್ಟೂನ್​​ನಲ್ಲಿ ಸಿಂಹವೊಂದು ಕುತ್ತಿಗೆಗೆ ಗಡಿಯಾರ ನೇತುಹಾಕೊಂಡಿದ್ದು, ಕೈಯಲ್ಲಿ ಕಮಲ ಹಿಡಿದಿದೆ. ಅಂದ್ರೆ ಇಲ್ಲಿ ಹುಲಿ ಶಿವಸೇನೆಯ ಗುರುತಾಗಿದ್ದು, ಕಮಲ ಬಿಜೆಪಿಯ ಗುರುತಾಗಿದೆ. ಇನ್ನು ಗಡಿಯಾರ ಎನ್​​ಸಿಪಿಯ ಗುರುತಾಗಿದೆ. ಇದರ ಅರ್ಥ ಶಿವಸೇನೆಗೆ ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯವಾಗದಿದ್ರೆ, ಎನ್​ಸಿಪಿ ಕೂಡ ಶಿವಸೇನೆ ಬೆಂಬಲಕ್ಕಿದೆ  ಅನ್ನೋದಾಗಿದೆ. ಈ ವ್ಯಂಗ್ಯ ಚಿತ್ರ ಟ್ವಿಟ್ಟರ್​​ನಲ್ಲಿ ಹಾಕಿರುವ ಸಂಜಯ್ ರಾವತ್​​, ತುಂಬಾ ಅದ್ಭುತವಾದ ವ್ಯಂಗ್ಯ ಚಿತ್ರ. ಟೆನ್ಶನ್ ಮಾಡ್ಕೋಬೇಡಿ ದೀಪಾವಳಿ ಇದೆ ಅಂತ ಬರೆದುಕೊಂಡಿದ್ದಾರೆ.

 

Contact Us for Advertisement

Leave a Reply