ಎಲಾನ್​ ಮಸ್ಕ್​​​ಗೆ ಸ್ವಾಗತ ಎಂದ ಮಹಾರಾಷ್ಟ್ರ ಸಚಿವ!

masthmagaa.com:

ಭಾರತಕ್ಕೆ ಇನ್ನೂ ಟೆಸ್ಲಾ ಯಾಕೆ ಬಂದಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ್ದ ಎಲಾನ್ ಮಸ್ಕ್​​, ಭಾರತ ಸರ್ಕಾರದ ಜೊತೆ ಹಲವು ಸವಾಲುಗಳನ್ನು ಎದುರಿಸ್ತಿದ್ದೀವಿ ಅಂತ ಹೇಳಿದ್ರು. ಅದ್ರ ಬೆನ್ನಲ್ಲೇ ಅವರಿಗೆ ಸ್ವಾಗತಗಳ ಮಹಾಪೂರ ಹರಿದು ಬರ್ತಿದೆ. ನಿನ್ನೆಯಷ್ಟೇ ತೆಲಂಗಾಣ ಸಿಎಂ ಕೆಸಿಆರ್ ಮಗ ಕೆಟಿಆರ್​​​ ಟ್ವೀಟ್ ಮಾಡಿ ತೆಲಂಗಾಣಕ್ಕೆ ಬನ್ನಿ ಅಂತ ಸ್ವಾಗತ ಕೋರಿದ್ರು. ಅದ್ರ ಬೆನ್ನಲ್ಲೇ ಇವತ್ತು ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಕೂಡ, ನಮ್ಮ ರಾಜ್ಯದಲ್ಲಿ ಟೆಸ್ಲಾ ಕಾರು ಉತ್ಪಾದನಾ ಘಟಕವನ್ನು ಶುರು ಮಾಡಿ. ನಿಮಗೆ ಏನೇನ್ ವ್ಯವಸ್ಥೆ ಬೇಕೋ ಅವೆಲ್ಲವನ್ನೂ ನಾವು ಮಾಡ್ಕೊಡ್ತೀವಿ ಅಂತ ಅಂತ ಟ್ವೀಟ್ ಮಾಡಿ, ಆಹ್ವಾನಿಸಿದ್ದಾರೆ.

-masthmagaa.com

Contact Us for Advertisement

Leave a Reply