ಮೇಕೆದಾಟು ಮತ್ತು ಬಿಎಸ್​ವೈ ದೆಹಲಿ ಪ್ರಯಾಣ!

masthmagaa.com:

ಮೇಕೆದಾಟು ಡ್ಯಾಂ ಯೋಜನೆಗೆ ಅಡ್ಡಾಗಲು ಹಾಕ್ತಿರೋ ತಮಿಳುನಾಡು ಇವತ್ತು ಸರ್ವಪಕ್ಷ ನಿಯೋಗ ತಗೊಂಡು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್​ರನ್ನ ಭೇಟಿಯಾಗಿದೆ. ಈ ವೇಳೆ ಮೇಕೆದಾಟು ವಿಚಾರದಲ್ಲಿ ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಸಹಾಯ ಮಾಡ್ಬಾರ್ದು ಅಂತ ಆಗ್ರಹಿಸಿದೆ. ಜೊತೆಗೆ ಕಾವೇರಿ ನದಿ ಹರಿಯೋ ರಾಜ್ಯಗಳ ನಿಲುವನ್ನ ಕೂಡ ಪರಿಗಣಿಸಬೇಕು ಅಂತಾನು ಒತ್ತಾಯಿಸಿದೆ.

ಇದ್ರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಕೈಗೊಂಡಿದ್ದಾರೆ. ವಿಶೇಷ ಚಾರ್ಟೆಡ್ ವಿಮಾನದಲ್ಲಿ ಪುತ್ರ ವಿಜಯೇಂದ್ರ ಜೊತೆಗೆ ತೆರಳಿರೋ ಯಡಿಯೂರಪ್ಪ, ಮಧ್ಯಾಹ್ನ 3.30ಕ್ಕೆ ಲ್ಯಾಂಡ್ ಆಗಿದ್ದಾರೆ. ಕಳೆದೆಂಟು ತಿಂಗಳಲ್ಲಿ ದೆಹಲಿಗೆ ಇದೇ ಮೊದಲ ಭಾರಿಗೆ ತೆರಳಿದ್ದು, ಪ್ರಧಾನಿ ಮೋದಿ ಸೇರಿದಂತೆ ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. ನಾಯಕತ್ವ ಬದಲಾವಣೆ ಬಿರುಗಾಳಿ ಬೀಸುತ್ತಿರೋದೇ ಈ ಭೇಟಿಗೆ ಕಾರಣ ಅಂತ ಹೇಳಲಾಗ್ತಿದೆಯಾದ್ರೂ, ಅದನ್ನು ಆರ್ ಅಶೋಕ್ ನಿರಾಕರಿಸಿದ್ದಾರೆ. ಯಡಿಯೂರಪ್ಪ ನಾರ್ಮಲ್ ವಿಸಿಟ್ ಕೊಡ್ತಿದ್ದಾರೆ. ಇದ್ರಲ್ಲಿ ಸ್ಪೆಷಲ್ ಏನೂ ಇಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಪ್ರಮುಖವಾಗಿ ಕೇಂದ್ರದ ನೀರಾವರಿ ಸಚಿವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಕಾವೇರಿ ಅಂದ್ರೆ ಮೇಕೆದಾಟು ವಿಚಾರ ಪ್ರಸ್ತಾಪವಾಗಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply