ತೃತೀಯ ರಂಗದ ಸುಳಿವು ಕೊಟ್ಟ ದೀದಿ ಮಮತಾ!

masthmagaa.com:

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಬರೋ ಘೋಷಣೆ ಮಾಡಿದ್ದಾರೆ. ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ನಾನು ಉತ್ತರ ಪ್ರದೇಶದಿಂದ ಸ್ಪರ್ಧಿಸ್ತೀನಿ. ಎಲ್ಲಾ ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ಸೋಲಿಸಲು ಒಟ್ಟಾಗಬೇಕಾದ ಅವಶ್ಯಕತೆ ಇದೆ ಅಂತ ಹೇಳಿದ್ದಾರೆ. ಈ ಮೂಲಕ ತೃತೀಯ ರಂಗ ರಚನೆಯ ಸುಳಿವು ಕೊಟ್ಟಿದ್ದಾರೆ.

ಮತ್ತೊಂದ್ಕಡೆ ತೃಣಮೂಲ ಕಾಂಗ್ರೆಸ್ ಚೇರ್ ಪರ್ಸನ್ ಆಗಿ ಮತ್ತೊಂದು ಅವಧಿಗೆ ಮಮತಾ ಬ್ಯಾನರ್ಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1998ರಲ್ಲಿ ದೀದಿ ಮಮತಾ ಬ್ಯಾನರ್ಜಿ ಕಾಂಗ್ರೆಸ್​ಗೆ ಗುಡ್​​ಬೈ ಹೇಳಿ, ಟಿಎಂಸಿ ಪಕ್ಷ ಸ್ಥಾಪಿಸಿದ್ರು. ಅಲ್ಲಿಂದ ಇಲ್ಲಿಯವರೆಗೆ ಅವರೇ ಅದ್ರ ಮುಖ್ಯಸ್ಥೆಯಾಗಿದ್ದಾರೆ.

-masthmagaa.com

Contact Us for Advertisement

Leave a Reply