masthmagaa.com:
ದೆಹಲಿ: ಕೋಳಿ ಮಾಂಸದ ರೇಟ್ ವಿಚಾರದಲ್ಲಿ ಚರ್ಚೆ ನಡೆದು ಅಣ್ಣ-ತಮ್ಮಂದಿರು ಸೇರಿಕೊಂಡು ವ್ಯಾಪಾರಿಯೊಬ್ಬನನ್ನು ಕೊಂದು ಹಾಕಿದ್ದಾರೆ. ದೆಹಲಿಯ ಜಹಾಂಗಿರ್ಪುರಿಯಲ್ಲಿ ಈ ಘಟನೆ ವರದಿಯಾಗಿದೆ. ಮೃತನನ್ನು ಶಿರಾಜ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಶಿರಾಜ್ ದೆಹಲಿಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ. ಆದ್ರೆ ಕೊರೋನಾ ಲಾಕ್ಡೌನ್ ಹೇರಿಕೆಯಾದ ಬಳಿಕ ಚಿಕನ್ ಮಾರಾಟ ಶುರು ಮಾಡಿದ್ದಾನೆ.
ಶಿರಾಜ್ ಬಳಿ ಬಂದ ಶಾ ಆಲಂ ಮತ್ತು ಆತನ ಸ್ನೇಹಿತರು ಕೋಳಿಗೆ ರೇಟ್ ಕೇಳಿದ್ದಾರೆ. ಈ ವೇಳೆ ಶಿರಾಜ್ ರೇಟ್ ಹೇಳಿದಾಗ, ಶಾ ಆಲಂ ಮತ್ತು ಆತನ ಸಹೋದರರು ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ಶಿರಾಜ್ಗೆ ಚಾಕುವಿನಿಂದ ಇರಿದು, ರಾಡ್ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಶಿರಾಜ್ನನ್ನು ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ ಅಷ್ಟರಲ್ಲಾಗಲೇ ಶಿರಾಜ್ ಸಾವನ್ನಪ್ಪಿದ್ದ. ಆರೋಪಿ ಶಾ ಆಲಂನನ್ನು ಅರೆಸ್ಟ್ ಮಾಡಿರೋ ಪೊಲೀಸರು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
-masthmagaa.com
Contact Us for Advertisement