ಕಾಂಗ್ರೆಸ್‌ನ ಶಿವರಾಂ ರಕ್ಷಿತ್‌ಗೆ ಸಪೋರ್ಟ್‌ ಮಾಡಿ ಅಂದ ಬಿಜೆಪಿ ಶಾಸಕ!

masthmagaa.com:

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್‌ ಕುಮಾರ್‌ ಕಟೀಲ್‌, ಅರುಣ್‌ ಪುತ್ತಿಲ ಸೇರಿದಂತೆ ಘಟಾನುಘಟಿ ನಾಯಕರೇ ಬಿಜೆಪಿ ಟಿಕೇಟ್‌ಗಾಗಿ ಲಾಬಿ ಮಾಡ್ತಿದ್ದಾರೆ. ಇದೇ ಹೊತ್ತಲ್ಲೆ ಮೂಡಬಿದಿರೆ ಬಿಜೆಪಿ ಶಾಸಕ ಉಮಾನಾಥ್‌ ಕೋಟ್ಯಾನ್‌ ಕಾಂಗ್ರೆಸ್‌ನ ರಕ್ಷಿತ್‌ ಶಿವರಾಮ್‌ ಅವ್ರನ್ನ ಬೆಂಬಲಿಸುವಂತೆ ತಮ್ಮ ಜನಾಂಗಕ್ಕೆ ಆಗ್ರಹಿಸಿದ್ದಾರೆ. ಬಿಲ್ಲವ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಕೋಟ್ಯಾನ್ ಈ ಮನವಿ ಮಾಡಿದ್ದು, ʻಪಕ್ಷ ಯಾವುದಾದ್ರೆ ಏನು ಬಿಲ್ಲವ ಜನಾಂಗದ ಶಿವರಾಂ ರಕ್ಷಿತ್‌ಗೆ ಸಪೋರ್ಟ್‌ ಮಾಡಿ‌ʼ ಅಂತ ಓಪನ್ನಾಗಿ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply