masthmagaa.com:
ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಜಾತಿ ಲೆಕ್ಕಾಚಾರ ಜೋರಾಗಿದೆ. ಈ ಬಗ್ಗೆ ಇವತ್ತು ಮಾತಾಡಿದ ಬಿಎಸ್ಪಿ ಅಧಿನಾಯಕಿ ಮಾಯಾವತಿ, ಬಿಜೆಪಿ ಬ್ರಾಹ್ಮಣ ಸಮುದಾಯವನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸ್ತಿದೆ. ಹೀಗಾಗಿ ಜುಲೈ 23ರಂದು ಅಯೋಧ್ಯೆಯಲ್ಲಿ ಒಂದು ಬ್ರಾಹ್ಮಣ ಸಮ್ಮೇಳನ ನಡೆಸ್ತೀವಿ. ಈ ಮೂಲಕ ಬಿಎಸ್ಪಿ ಅಧಿಕಾರಕ್ಕೆ ಬಂದ್ರೆ ಬ್ರಾಹ್ಮಣರ ಹಿತಕ್ಕೆ ಯಾವುದೇ ಧಕ್ಕೆಯಾಗೋದಿಲ್ಲ ಅನ್ನೋ ಭರವಸೆ ನೀಡಲು ಯತ್ನಿಸ್ತೀವಿ.ಈಗಾಗಲೇ ದಲಿತ ಸಮುದಾಯ ಬಿಜೆಪಿಯ ದುಡ್ಡಿನ ಆಮಿಷಗಳಿಗೆ ಒಳಗಾಗದೇ ನಮ್ಮ ಜೊತೆಗಿದೆ. ಅದೇ ರೀತಿ ಬ್ರಾಹ್ಮಣ ಸಮುದಾಯ ಕೂಡ ನಮ್ಮ ಜೊತೆಗಿರಬೇಕು ಅಂತ ಹೇಳಿದ್ದಾರೆ.
-masthmagaa.com
Contact Us for Advertisement