ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗಲ್ಲ: ಸೋಮಣ್ಣ ಸ್ಪಷ್ಟನೆ

masthmagaa.com:

ಹಾಲಿ ಸಚಿವ ಬಿಜೆಪಿ ನಾಯಕ ವಿ ಸೋಮಣ್ಣ ಕಾಂಗ್ರೆಸ್‌ ಸೇರ್ತಾರೆ ಅನ್ನೊ ವಿಷಯ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡ್ತಿದ್ದುಇದಕ್ಕೆ ಖುದ್ದು ಸೋಮಣ್ಣ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಕಾಂಗ್ರೆಸ್‌ಗೆ ಹೋಗುವ ಯಾವುದೇ ಯೋಚನೆ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನನ್ನನ್ನ ಸಂಪರ್ಕಿಸಿಲ್ಲ. ನಾನು ಕಾಂಗ್ರೆಸ್‌ಗೆ ಹೋಗ್ತೀನಿ ಅಂತ ವದಂತಿ ಹಬ್ಬಿಸ್ತಿದಾರೆ. ಅದೆಲ್ಲ ಸುಳ್ಳು ಅಂತೇಳಿ ಎಲ್ಲ ಗೊಂದಲಗಳಿಗೆ ಸೋಮಣ್ಣ ತೆರೆ ಎಳೆದಿದ್ದಾರೆ. ಹಾಗೂ ಈ ಬಾರಿ ಟಿಕೆಟ್‌ ಕೊಟ್ರೆ ಮತ್ತೆ ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತೀನಿ ಅಂತ ಸೋಮಣ್ಣ ಹೇಳಿದ್ದಾರೆ. ಆದ್ರೆ ಕಾಂಗ್ರೆಸ್‌ಗೆ ಸೋಮಣ್ಣ ಹೋಗ್ತಾರೆ ಅನ್ನೋ ವಾದ ಇನ್ನೂ ಕೂಡ ತಣ್ಣಗಾಗಿಲ್ಲ. ಯಾಕಂದ್ರೆ ಇನ್ನೊಂದ್‌ ಕಡೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ದ ಸೋಮಣ್ಣ ಅವರ ಪುತ್ರ ಅರುಣ್‌ ಸೋಮಣ್ಣ, ವಿಜಯೇಂದ್ರ ಹೆಸರು ಹೇಳದೇ ಕಿಡಿಕಾರಿದ್ದಾರೆ. ʻನಮ್ಮ ಪಕ್ಷದಲ್ಲಿ ಹಿರಿಯ ನಾಯಕರಿದ್ದಾರೆ. ಅವರು ತಮ್ಮ ಸೀಟನ್ನ ತ್ಯಾಗ ಮಾಡಿ ತಮ್ಮ ಮಗನನ್ನ ಕೂರಿಸಿದ್ದಾರೆ. ಈಗ ಅವನು ಇಡೀ ಕರ್ನಾಟಕಕ್ಕೆ ಲೀಡರ್‌ ಅನ್ನೊ ತರ ಓಡಾಡ್ತಿದಾನೆʼ ಅಂತ ವಿಜಯೇಂದ್ರ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply