masthmagaa.com:
ಉತ್ತರ ಪ್ರದೇಶದ ಲಖೀಂಪುರ್ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ಉತ್ತರ ಪ್ರದೇಶ ಪೊಲೀಸ್ ವಿಶೇಷ ತನಿಖಾ ತಂಡ ಸ್ಥಳೀಯ ಕೋರ್ಟ್ಗೆ 5 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. ಇವತ್ತು ಬೆಳಗ್ಗೆ ಲಖೀಂಪುರ್ಖೇರಿಯ ಸಿಟಿ ಕೋರ್ಟ್ಗೆ ದೊಡ್ಡ ಟ್ರಂಕ್ನಲ್ಲಿ ಚಾರ್ಜ್ಶೀಟ್ ತರಲಾಯ್ತು. ಅದಕ್ಕೆ ಎರಡೆರಡು ಬೀಗಗಳನ್ನು ಕೂಡ ಹಾಕಲಾಗಿತ್ತು. 2021ರ ಅಕ್ಟೋಬರ್ನಲ್ಲಿ ಕೃಷಿಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಅವರ ಮೇಲೆ ಕಾರು ಹತ್ತಿಸಲಾಗಿತ್ತು. ಇದ್ರಲ್ಲಿ 8 ಮಂದಿ ಪ್ರಾಣ ಬಿಟ್ಟಿದ್ರು. ಇದ್ರಲ್ಲಿ ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದಾರೆ. ಒಂದು ವೇಳೆ ಕೋರ್ಟ್ ಚಾರ್ಜ್ಶೀಟ್ ಒಪ್ಕೊಂಡು, ದಿನಾಂಕ ಫಿಕ್ಸ್ ಮಾಡಿದ್ರೆ ವಿಚಾರಣೆ ಶುರುವಾಗಲಿದೆ.
-masthmagaa.com
Contact Us for Advertisement