ಲಖೀಂಪುರ್​ಖೇರಿ ಹಿಂಸಾಚಾರ: ಪೊಲೀಸರಿಂದ ಚಾರ್ಜ್​ಶೀಟ್ ಸಲ್ಲಿಕೆ

masthmagaa.com:

ಉತ್ತರ ಪ್ರದೇಶದ ಲಖೀಂಪುರ್​​ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ಉತ್ತರ ಪ್ರದೇಶ ಪೊಲೀಸ್​​ ವಿಶೇಷ ತನಿಖಾ ತಂಡ ಸ್ಥಳೀಯ ಕೋರ್ಟ್​​​​ಗೆ 5 ಸಾವಿರ ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದೆ. ಇವತ್ತು ಬೆಳಗ್ಗೆ ಲಖೀಂಪುರ್​ಖೇರಿಯ ಸಿಟಿ ಕೋರ್ಟ್​​​​​​ಗೆ ದೊಡ್ಡ ಟ್ರಂಕ್​​ನಲ್ಲಿ ಚಾರ್ಜ್​​ಶೀಟ್ ತರಲಾಯ್ತು. ಅದಕ್ಕೆ ಎರಡೆರಡು ಬೀಗಗಳನ್ನು ಕೂಡ ಹಾಕಲಾಗಿತ್ತು. 2021ರ ಅಕ್ಟೋಬರ್​ನಲ್ಲಿ ಕೃಷಿಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಅವರ ಮೇಲೆ ಕಾರು ಹತ್ತಿಸಲಾಗಿತ್ತು. ಇದ್ರಲ್ಲಿ 8 ಮಂದಿ ಪ್ರಾಣ ಬಿಟ್ಟಿದ್ರು. ಇದ್ರಲ್ಲಿ ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದಾರೆ. ಒಂದು ವೇಳೆ ಕೋರ್ಟ್​ ಚಾರ್ಜ್​ಶೀಟ್ ಒಪ್ಕೊಂಡು, ದಿನಾಂಕ ಫಿಕ್ಸ್ ಮಾಡಿದ್ರೆ ವಿಚಾರಣೆ ಶುರುವಾಗಲಿದೆ.

-masthmagaa.com

Contact Us for Advertisement

Leave a Reply