masthmagaa.com:
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ಗೆ ಸಚಿವ ಸ್ಥಾನ ನೀಡಬಾರ್ದು ಅಂತ ನವಭಾರತ ಸೇವಾ ಪಕ್ಷದ ಸಂಚಾಲಕ ರುಕ್ಮಾಂಗದ ಮನವಿ ಮಾಡಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಚುನಾವಣಾ ಸಮಯದಲ್ಲಿ ಜಮೀರ್ ಅಹಮದ್ ನಾಮಪತ್ರದಲ್ಲಿ ದೋಷಗಳು ಕಂಡು ಬಂದಿದ್ದವು. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ವಿ. ಆದರೂ ಚುನಾವಣಾ ಅಧಿಕಾರಿಗಳು ಚುನಾವಣೆಗೆ ನಿಲ್ಲಲು ಜಮೀರ್ಗೆ ಅವಕಾಶ ಕೊಟ್ಟಿದ್ದರು. ಈಗ ನಾವು ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಧಾವೆ ಹೂಡಲಿದ್ದೇವೆ. ಹೀಗಾಗಿ ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಬಾರ್ದು. ಒಂದ್ ವೇಳೆ ಕಾಂಗ್ರೆಸ್ ಹೈಕಮಾಂಡ್ ಅವ್ರಿಗೆ ಸಚಿವ ಸ್ಥಾನ ನೀಡಿದ್ರೂ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಬಾರದು ಅಂತ ಆಗ್ರಹಿಸಿದ್ದಾರೆ.
-masthmagaa.com
Contact Us for Advertisement