ಶಾಸಕ ಜಮೀರ್‌ ಅಹ್ಮದ್‌ರಿಗೆ ಸಚಿವ ಸ್ಥಾನ ನೀಡಬಾರ್ದು: ನವಭಾರತ ಸೇವಾ ಪಕ್ಷ

masthmagaa.com:

ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್‌ ಖಾನ್‌ಗೆ ಸಚಿವ ಸ್ಥಾನ ನೀಡಬಾರ್ದು ಅಂತ ನವಭಾರತ ಸೇವಾ ಪಕ್ಷದ ಸಂಚಾಲಕ ರುಕ್ಮಾಂಗದ ಮನವಿ ಮಾಡಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಚುನಾವಣಾ ಸಮಯದಲ್ಲಿ ಜಮೀರ್ ಅಹಮದ್ ನಾಮಪತ್ರದಲ್ಲಿ ದೋಷಗಳು ಕಂಡು ಬಂದಿದ್ದವು. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ವಿ. ಆದರೂ ಚುನಾವಣಾ ಅಧಿಕಾರಿಗಳು ಚುನಾವಣೆಗೆ ನಿಲ್ಲಲು ಜಮೀರ್​ಗೆ ಅವಕಾಶ ಕೊಟ್ಟಿದ್ದರು. ಈಗ ನಾವು ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಧಾವೆ ಹೂಡಲಿದ್ದೇವೆ. ಹೀಗಾಗಿ ಜಮೀರ್ ಅಹಮದ್​ ಖಾನ್ ಅವರಿಗೆ ಸಚಿವ ಸ್ಥಾನ ನೀಡಬಾರ್ದು. ಒಂದ್‌ ವೇಳೆ ಕಾಂಗ್ರೆಸ್ ಹೈಕಮಾಂಡ್ ಅವ್ರಿಗೆ ಸಚಿವ ಸ್ಥಾನ ನೀಡಿದ್ರೂ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಬಾರದು ಅಂತ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply