masthmagaa.com:
ಇಂಡೋನೇಷ್ಯಾದ ಅಸೆಹ್ ಪ್ರಾಂತ್ಯಕ್ಕೆ ರೋಹಿಂಗ್ಯ ವಲಸಿಗರ ದೋಣಿಯೊಂದು ಹೋಗಿದೆ. ಇದ್ರಲ್ಲಿ ಸುಮಾರು 81 ಮಂದಿ ಇದ್ದು, ಬಾಂಗ್ಲಾದೇಶದ ನಿರಾಶ್ರಿತರ ಕೇಂದ್ರದಿಂದ ತಪ್ಪಿಸಿಕೊಂಡು ಬಂದಿದ್ದಾರೆ ಅಂತ ಸ್ಥಳೀಯ ಅಧಿಕಾರಿಗಳು ತಿಳಿಸಿದ್ಧಾರೆ. ಬೌದ್ಧದೇಶವಾದ ಮಯನ್ಮಾರ್ನಲ್ಲಿ ರೋಹಿಂಗ್ಯ ಮುಸ್ಲಿಮರ ವಿರುದ್ಧ ಹಿಂಸಾಚಾರ ಶುರುವಾದ ಬಳಿಕ ಅಂದ್ರೆ 2017ರಿಂದೆ ಈವರೆಗೆ ಸುಮಾರು 7 ಲಕ್ಷ ಮಂದಿ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಹೋಗಿದ್ದಾರೆ. ಆದ್ರೆ ಅಲ್ಲೂ ಕೂಡ ಅವರಿಗೆ ನೆಲೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶಗಳತ್ತ ಮುಖ ಮಾಡ್ತಿದ್ದಾರೆ. ಅದೇ ರೀತಿ 90 ಜನರ ಈ ಗುಂಪು ಕೂಡ ಬಾಂಗ್ಲಾದೇಶದ ನಿರಾಶ್ರಿತರ ಕೇಂದ್ರದಿಂದ ದೋಣಿಯೊಂದರಲ್ಲಿ ತಪ್ಪಿಸಿಕೊಂಡು ಹೊರಟಿತ್ತು. ಫೆಬ್ರವರಿ 11ರಂದು ಹೊರಟಿದ್ದ ಈ ತಂಡ ದೀರ್ಘಕಾಲ ಪ್ರಯಾಣ ಮಾಡಿ ಈಗ ಇಂಡೋನೇಷ್ಯಾಗೆ ಬಂದಿದೆ. ಮಾರ್ಗ ಮಧ್ಯದಲ್ಲೇ 9 ಮಂದಿ ಜೀವ ಬಿಟ್ಟಿದ್ದು, ಇನ್ನು 81 ಮಂದಿ ಉಳಿದಿದ್ದಾರೆ. ಈ ನಡುವೆ ಆಸಿಯಾನ್ ಅಂದ್ರೆ ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್ ಮಯನ್ಮಾರ್ ಮಿಲಿಟರಿ ಅಧ್ಯಕ್ಷ ಮಿನ್ ಆಂಗ್ ಲೇಯಿಂಗ್ ಭೇಟಿಯಾಗಿದ್ದಾರೆ. 6 ವಾರಗಳ ಹಿಂದೆ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಮಯನ್ಮಾರ್ ಮಿಲಿಟರಿ ಆಡಳಿತ ದೇಶದಲ್ಲಿರೋ ಸಂಘರ್ಷದ ಸ್ಥಿತಿಯನ್ನು ಬಗೆಹರಿಸೋದಾಗಿ ಭರವಸೆ ನೀಡಿತ್ತು. ಆದ್ರೂ ಕೂಡ ಈ ಬಗ್ಗೆ ಯಾವುದೇ ಬೆಳವಣಿಗೆ ನಡೆದಿಲ್ಲ.
-masthmagaa.com
Contact Us for Advertisement