masthmagaa.com:
ತಾಯಿ-ಮಗನ ಆತ್ಮಹತ್ಯೆ ಸಂಬಂಧ ತೆಲಂಗಾಣದ ಸಿಎಂ ಕೆ. ಚಂದ್ರಶೇಖರ್ ರಾವ್ ಅವ್ರ TRS ಪಕ್ಷದ ಆರು ನಾಯಕರನ್ನ ಅರೆಸ್ಟ್ ಮಾಡಲಾಗಿದೆ. ಗಂಗಮ್ ಸಂತೋಷ್ ಹಾಗು ಗಂಗಮ್ ಪದ್ಮಾ ಮೃತ ವ್ಯಕ್ತಿಗಳು. ಆತ್ಮಹತ್ಯೆಗು ಮುನ್ನ ಸಂತೊಷ್ ಒಂದು ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ರಾಮಯಂಪೇಟೆ ಪುರಸಭೆ ಅಧ್ಯಕ್ಷ ಪಲ್ಲೆ ಜಿತೇಂದರ್ ಗೌಡ್, ಇತರ ಐವರು ಟಿಆರ್ಎಸ್ ಮುಖಂಡರು ಮತ್ತು ಸರ್ಕಲ್ ಇನ್ಸ್ಪೆಕ್ಟರ್ ನಾಗಾರ್ಜುನ ರೆಡ್ಡಿ ಅವ್ರನ್ನ ಫೋಟೊ ಸಮೇತ ಉಲ್ಲೇಖಿಸಿದ್ದಾರೆ. ಜೊತೆಗೆ ಕಿರುಕುಳ ನೀಡಿದ್ದಾರೆ ಅಂತ ಆರೋಪಿಸಿದ್ದಾರೆ. ಈ ಆರೋಪದ ಹಿನ್ನಲೆಯಲ್ಲಿ ತೆಲಂಗಾಣದ ರೂಲಿಂಗ್ ಪಕ್ಷ ʼತೆಲಂಗಾಣ ರಾಷ್ಟ್ರ ಸಮಿತಿʼ (TRS)ಯ ಆರು ಮುಖಂಡನ್ನ ಬಂಧಿಸಲಾಗಿದೆ ಅಂತ ಪೋಲಿಸರು ತಿಳಿಸಿದ್ದಾರೆ.
-masthmagaa.com
Contact Us for Advertisement