masthmagaa.com:
ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಯುನಿಟೆಕ್ ಮಾಜಿ ಪ್ರಮೋಟರ್ಸ್ ಸಂಜಯ್ ಚಂದ್ರ ಮತ್ತು ಅಜಯ್ ಚಂದ್ರರನ್ನ ತಕ್ಷಣ ಮುಂಬೈನ ಅರ್ಥರ್ ರೋಡ್ ಜೈಲು ಮತ್ತು ತಲೋಜಾ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಕಾರಣ ಏನ್ ಗೊತ್ತಾ ಇವರಿಬ್ರು ತಿಹಾರ್ ಜೈಲಿನಿಂದಲೇ ಆಪರೇಟ್ ಮಾಡ್ತಿದ್ರು ಅನ್ನೋದು. ಜೈಲಿನಲ್ಲೇ ರಹಸ್ಯವಾಗಿ ಅಂಡರ್ಗ್ರೌಂಡ್ ಆಫೀಸ್ ಇಟ್ಕೊಂಡಿದ್ರು ಅನ್ನೋದು. ಈ ಕಚೇರಿಯಲ್ಲಿ ಪ್ರಾಪರ್ಟಿ ಸೇಲ್ಗೆ ಸಂಬಂಧಿಸಿದ ಒರಿಜಿನಲ್ ಪೇಪರ್ಸ್, ಡಿಜಿಟಲ್ ಸಿಗ್ನೇಚರ್ಸ್ ಮತ್ತು ಕಂಪ್ಯೂಟರ್ಗಳು ಸಿಕ್ಕಿವೆ ಅಂತ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ಗೆ ಹೇಳಿತ್ತು. ಜೈಲಿನಿಂದಲೇ ಆರೋಪಿಗಳು ಆಪರೇಟ್ ಮಾಡ್ತಿದ್ದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರೋ ಕೋರ್ಟ್ ಇಬ್ಬರನ್ನ ಕೂಡ ದೆಹಲಿ ಜೈಲಿಂದ ಮುಂಬೈ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಅದು ಕೂಡ ಬೇರೆ ಬೇರೆ ಜೈಲಿಗೆ. ಈ ಜೈಲುಗಳಲ್ಲಿ ಇಬ್ಬರಿಗೂ ಯಾವುದೇ ಹೆಚ್ಚುವರಿ ಸೌಲಭ್ಯ ನೀಡ್ಬಾರ್ದು ಅಂತ ಕೂಡ ಸುಪ್ರೀಂಕೋರ್ಟ್ ಆದೇಶಿಸಿದೆ. ಜೊತೆಗೆ ಈ ಪ್ರಕರಣ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುವಂತೆ ಸೂಚಿಸಿದೆ. ನೋಡಿ ನಮ್ಮ ಜೈಲುಗಳು ಹೇಗಿವೆ ಅಂತ. ಜೈಲಿನ ಒಳಗೆ ಆರೋಪಿಗಳ ಅಂಡರ್ಗ್ರೌಂಡ್ ಸೀಕ್ರೆಟ್ ಆಫೀಸ್ ಅಂತೆ.
-masthmagaa.com
Contact Us for Advertisement