masthmagaa.com:
ಮುಂಬೈ ಟು ಗೋವಾ ಹಡಗಲ್ಲಿ ಮಾದಕ ಪಾರ್ಟಿ ಪ್ರಕರಣದಲ್ಲಿ ಬಂಧಿಯಾಗಿರೋ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಇವತ್ತು ನಡೀತು. ಬಾಂಬೆ ಹೈಕೋರ್ಟ್ನಲ್ಲಿ ನಿನ್ನೆ ಶುರುವಾಗಿದ್ದ ವಿಚಾರಣೆ ಇವತ್ತು ಮುಂದುವರೀತು. ಆದ್ರೆ ಇವತ್ತು ಕೂಡ ಕೋರ್ಟ್ ಜಾಮೀನು ನೀಡಿಲ್ಲ. ನಾಳೆಗೆ ವಿಚಾರಣೆಯನ್ನು ಮುಂದೂಡಿದೆ. ಆರ್ಯನ್ ಪರ ವಕೀಲರಾದ ಮುಕುಲ್ ರೋಹ್ಟಗಿ ಇವತ್ತು ಕೂಡ, ಆರ್ಯನ್ ಖಾನ್ರನ್ನು ಯಾವುದೇ ಕಾರಣವಿಲ್ಲದೇ ಅರೆಸ್ಟ್ ಮಾಡಲಾಗಿದೆ. ಆರ್ಯನ್ ಮಾದಕ ವಸ್ತು ಸೇವಿಸಿಯೂ ಇರಲಿಲ್ಲ. ಆತನ ಬಳಿ ಮಾದಕ ವಸ್ತು ಸಿಕ್ಕೂ ಇಲ್ಲ ಅಂತ ವಾದ ಮಂಡಿಸಿದ್ದಾರೆ.
ಇನ್ನು ಇದೇ ಪ್ರಕರಣದಲ್ಲಿ ಅರೆಸ್ಟ್ ಆಗಿರೋ ಮನಿಶ್ ರಾಜ್ಗರಿಯಾ ಮತ್ತು ಅವಿನ್ ಸಾಹುಗೆ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
-masthmagaa.com
Contact Us for Advertisement