ಯತ್ನಾಳ್‌ಗೆ ದೀಪ ಆರುವಾಗ ಜಾಸ್ತಿ ಉರಿಯುತ್ತೆ ಅಂದ್ರಾ ನಿರಾಣಿ?

masthmagaa.com:

ಬಿಜೆಪಿ ನೂತನ ಪದಾಧಿಕಾರಿಗಳ ನೇಮಕಾತಿ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿ ಒಳಗೆ ಕೆಜೆಪಿ-2, ಕೆಜೆಪಿ-3 ಇದೆ ಅಂತ ಟೀಕೆ ಮಾಡಿದ್ರು. ಇದಕ್ಕೆ ಮಾಜಿ ಸಚಿವ ಮುರುಗೇಶ್​​ ನಿರಾಣಿ ಕೌಂಟರ್‌ ಕೊಟ್ಟಿದ್ದಾರೆ. ಯತ್ನಾಳ್‌ ಹೆಸರು ತೆಗೆದುಕೊಳ್ದೇ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ. ʻಅವ್ರ ಮಾತನ್ನ ಯಾರು ಸೀರಿಯಸ್‌ ಆಗಿ ತಗೋಳಲ್ಲ. ಏನು ಮಾತಾಡ್ತಿದ್ದೀನಿ ಅಂತಾ ಅವ್ರಿಗೆ ಅರ್ಥ ಆಗತ್ತೋ ಇಲ್ವೋ ಗೊತ್ತಿಲ್ಲ. ದೀಪ ಆರುವಾಗ ಗಾಳಿಗೆ ಜಾಸ್ತಿ ಉರಿಯುತ್ತೆʼ ಅಂತ ತಿರುಗೇಟು ನೀಡಿದ್ದಾರೆ. ಅಲ್ಲದೆ, ʻಇನ್ನು ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತೆ. ಈ ಸರ್ಕಾರ ಹಿಂದೂಗಳಿಗೆ ತಾರತಮ್ಯ ಮಾಡುತ್ತಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಕೋಮಾದಲ್ಲಿದೆ. ಇನ್ನೇನು ತಾನಾಗೆ ಬಿದ್ದೋಗತ್ತೆʼ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply