ಮತ್ತೆ ಮುನ್ನಲೆಗೆ ಮಥುರಾ ಮಸೀದಿ ಕೇಸ್: ಏಪ್ರಿಲ್‌ 1ಕ್ಕೆ ವಿಚಾರಣೆ!

masthmagaa.com:

ಶ್ರೀ ಕೃಷ್ಣ ನಗರಿ ಮಥುರಾದ ಶಾಹಿ ಇದ್ಗಾ ಮಸೀದಿ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಅಲಹಾಬಾದ್‌ ಹೈಕೋರ್ಟ್‌ನಲ್ಲಿರೊ ಈ ಕೇಸ್‌ ಬಗ್ಗೆ ಮಾರ್ಚ್‌ 20ರಂದು ವಿಚಾರಣೆ ನಡೆದಿದೆ. ಮಸೀದಿ ಆವರಣದಲ್ಲಿರೊ ಕೃಷ್ಣಾ ಕೂಪ್‌ನಲ್ಲಿ ಬಸೋಡಾ ಪೂಜೆ ಸಲ್ಲಿಸಲು ಅನುಮತಿ ಕೋರಿ ಹಿಂದೂ ಪರ ವಕೀಲ ಅಶುತೋಘ ಪಾಂಡೆ ಮನವಿ ಸಲ್ಲಿಸಿದ್ರು. ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಶಾಹಿ ಇದ್ಗಾ ಮಸೀದಿ ಆಡಳಿತ, ಹಿಂದೂ ಪರ ಅರ್ಜಿದಾರರ ಮನವಿಯನ್ನ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇರೊ 18 ಅರ್ಜಿಗಳನ್ನ ಏಪ್ರಿಲ್‌ 1ಕ್ಕೆ ವಿಚಾರಣೆ ನಡೆಸೊದಾಗಿ ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply