masthmagaa.com:
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಜಾಗಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಇವತ್ತು ಹೋಗಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಅತ್ಯಾಚಾರಿಗಳನ್ನ ಹಿಡಿಯೋಕೆ ತನಿಖೆ ನಡೀತಿದೆ. ಯುವತಿಗೆ ಚಿಕಿತ್ಸೆ ನೀಡಲಾಗ್ತಿದೆ. ಆಕೆಗೆ ಭದ್ರತೆಯನ್ನ ಕೂಡ ಹೆಚ್ಚಿಸಲಾಗಿದೆ ಅಂದ್ರು. ಇನ್ನು ಪ್ರಕರಣ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ನಿರೀಕ್ಷಕ – DG/IGP ಪ್ರವೀಣ್ ಸೂದ್ ಇವತ್ತು ಸುದ್ದಿಗೋಷ್ಠಿ ನಡೆಸಿ ಕೆಲವೊಂದು ಮಾಹಿತಿ ಕೊಟ್ರು. ಇದು ತುಂಬಾ ಸೂಕ್ಷ್ಮವಾದ ವಿಚಾರ. ಎಲ್ಲವನ್ನ ಹೇಳಕ್ಕಾಗಲ್ಲ. ಆದ್ರೆ ಈ ಪ್ರಕರಣವನ್ನ ಭೇದಿಸಿ ತೋರಿಸ್ತೀವಿ ಅನ್ನೋ ಭರವಸೆ ಇದೆ. ಅದಕ್ಕೆ ಸಮಯಬೇಕು. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಹೇಳಿಕೆ ಇನ್ನೂ ದಾಖಲಿಸಿಲ್ಲ. ಆಕೆ ಶಾಕ್ನಲ್ಲಿದ್ದಾಳೆ. ಆಕೆ ಹೇಳಿಕೆ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ನಾವು ತನಿಖೆ ಮಾಡೋದು ನಿಲ್ಲಿಸಿಲ್ಲ. ತನಿಖೆ ನಡೀತಿದೆ. ನಮ್ಮ ತನಿಖೆಗೆ ಆಕೆ ಸಹಕಾರ ಕೊಡ್ತೀನಿ ಅಂತ ಹೇಳಿದ್ದಾಳೆ. ಆಕೆ ಸುಧಾರಿಸಿಕೊಂಡ ಮೇಲೆ ಹೇಳಿಕೆ ಕೊಡ್ತಾಳೆ. ಆಗ ಹೋಗಿ ಆಕೆಯ ಹೇಳಿಕೆ ದಾಖಲಿಸಿಕೊಳ್ತೀವಿ ಎಂದಿದ್ಧಾರೆ.
-masthmagaa.com
Contact Us for Advertisement