BIG BREAKING: ನಾಳೆ ಕರ್ನಾಟಕ ಬಂದ್​ ಇಲ್ಲ.. 3 ಕಾರಣ ಕೊಟ್ಟ ವಾಟಾಳ್ ನಾಗರಾಜ್

masthmagaa.com:

ಡಿಸೆಂಬರ್ 31ರರ ಕರ್ನಾಟಕ ಬಂದ್ ಕ್ಯಾನ್ಸಲ್ ಆಗಿದೆ. ಎಂಇಎಸ್​ ಅನ್ನ ಬ್ಯಾನ್​ ಮಾಡಬೇಕು ಅಂತ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್​​ಗೆ ಕರೆ ನೀಡಿದ್ವು. ಬಂದ್​ ಮಾಡೇ ಮಾಡ್ತೀವಿ ಅಂತ ವಾಟಾಳ್ ನಾಗರಾಜ್​ ಹೇಳ್ತಾ ಬರ್ತಿದ್ರು. ಆದ್ರೀಗ ಸಿಎಂ ಬೊಮ್ಮಾಯಿ ಬಂದ್​ ಮಾಡ್ಬೇಡಿ ಅಂತ ಮನವಿ ಮಾಡಿಕೊಂಡ ಹಿನ್ನೆಲೆ, ಎಂಇಎಸ್​ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ ಹಿನ್ನೆಲೆ, ಮತ್ತು ಡಿಸೆಂಬರ್ 31ಕ್ಕೆ ಮಾಡೋದು ಬೇಡ ಅಂತ ನಮ್ಮ ಒಕ್ಕೂಟದವರು ಭಾರಿ ಒತ್ತಡ ಹೇರಿದ ಹಿನ್ನೆಲೆ ಬಂದ್​ ಅನ್ನ ವಾಪಸ್ ಪಡೆದುಕೊಳ್ಳಲಾಗಿದೆ ಅಂತ ವಾಟಾಳ್ ನಾಗರಾಜ್​ ಹೇಳಿದ್ದಾರೆ. ಸಿಎಂ ಬೊಮ್ಮಾಯಿಯನ್ನ ವಾಟಾಳ್​ ನಾಗರಾಜ್​ ಭೇಟಿ ಮಾಡಿದ ಬಳಿಕ ಈ ಘೋಷಣೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply