masthmagaa.com:
ಡಿಸೆಂಬರ್ 31ರರ ಕರ್ನಾಟಕ ಬಂದ್ ಕ್ಯಾನ್ಸಲ್ ಆಗಿದೆ. ಎಂಇಎಸ್ ಅನ್ನ ಬ್ಯಾನ್ ಮಾಡಬೇಕು ಅಂತ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಿದ್ವು. ಬಂದ್ ಮಾಡೇ ಮಾಡ್ತೀವಿ ಅಂತ ವಾಟಾಳ್ ನಾಗರಾಜ್ ಹೇಳ್ತಾ ಬರ್ತಿದ್ರು. ಆದ್ರೀಗ ಸಿಎಂ ಬೊಮ್ಮಾಯಿ ಬಂದ್ ಮಾಡ್ಬೇಡಿ ಅಂತ ಮನವಿ ಮಾಡಿಕೊಂಡ ಹಿನ್ನೆಲೆ, ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ ಹಿನ್ನೆಲೆ, ಮತ್ತು ಡಿಸೆಂಬರ್ 31ಕ್ಕೆ ಮಾಡೋದು ಬೇಡ ಅಂತ ನಮ್ಮ ಒಕ್ಕೂಟದವರು ಭಾರಿ ಒತ್ತಡ ಹೇರಿದ ಹಿನ್ನೆಲೆ ಬಂದ್ ಅನ್ನ ವಾಪಸ್ ಪಡೆದುಕೊಳ್ಳಲಾಗಿದೆ ಅಂತ ವಾಟಾಳ್ ನಾಗರಾಜ್ ಹೇಳಿದ್ದಾರೆ. ಸಿಎಂ ಬೊಮ್ಮಾಯಿಯನ್ನ ವಾಟಾಳ್ ನಾಗರಾಜ್ ಭೇಟಿ ಮಾಡಿದ ಬಳಿಕ ಈ ಘೋಷಣೆ ಮಾಡಿದ್ದಾರೆ.
-masthmagaa.com
Contact Us for Advertisement