ಶಾರುಖ್​ ಖಾನ್​​ಗೆ ಶಾಕ್​!​ ಪುತ್ರನಿಗೆ ಮತ್ತೆ 3 ದಿನ NCB ಕಸ್ಟಡಿ!

masthmagaa.com:

ಮುಂಬೈ ಕರಾವಳಿಯಲ್ಲಿ ಕ್ರೂಸ್​ ಶಿಪ್​​ ಪಾರ್ಟಿ ಕೇಸ್​ನಲ್ಲಿ ಸಿಕ್ಕಾಕ್ಕೊಂಡಿರೋ ಬಾಲಿವುಡ್​ ನಟ ಶಾರುಖ್​ ಖಾನ್ ಪುತ್ರ ಆರ್ಯನ್ ಖಾನ್​ ಮತ್ತು ಇತರರನ್ನ ಮುಂಬೈನ ಸಿಟಿ ಕೋರ್ಟ್​ ಅಕ್ಟೋಬರ್​ 7ನೇ ತಾರೀಖಿನವರೆಗೆ ಎನ್​ಸಿಬಿ ಕಸ್ಟಡಿಗೆ ಕಳಿಸಿದೆ. ಎನ್​ಸಿಬಿ ಪರ ವಾದ ಮಾಡಿದ ಎಎಸ್​ಜಿ ಅನಿಲ್ ಸಿಂಗ್​, ಆರ್ಯನ್ ಖಾನ್ ಸೇರಿದಂತೆ ಪ್ರಮುಖ ಮೂರು ಆರೋಪಿಗಳನ್ನ ಮತ್ತಷ್ಟು ವಿಚಾರಣೆ ನಡೆಸಲು ಅವರನ್ನ ಮತ್ತೆ 9 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರು. ಅತ್ತ ಶಾರುಖ್ ಪುತ್ರ ಆರ್ಯನ್ ಖಾನ್ ಪರ ವಾದ ಮಂಡಿಸಿದ ವಕೀಲರಾದ ಸತೀಶ್ ಮಾನೆಶಿಂದೆ, ನನ್ನ ಕ್ಲೈಂಟ್​​ನಿಂದ ಯಾವುದೇ ಮಾದಕ ವಸ್ತುವನ್ನ ಸೀಜ್ ಮಾಡಿಲ್ಲ. ​ಒಂದ್ವೇಳೆ ಬೇರೆ ಆರೋಪಿಗಳ ಬಳಿ ಮಾದಕ ವಸ್ತು ಸಿಕ್ತು ಅಂತ ನನ್ನ ಕ್ಲೈಂಟ್ ಅನ್ನ ಕಸ್ಟಡಿಗೆ ತೆಗೆದುಕೊಳ್ಳೋದ್ರಲ್ಲಿ ಯಾವುದೇ ಆಧಾರವಿಲ್ಲ ಅಂತ ವಾದಿಸಿದ್ರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆರ್ಯನ್ ಸೇರಿದಂತೆ ಕ್ರೂಸ್​ ಶಿಪ್​ ಪಾರ್ಟಿಯ ಎಲ್ಲಾ 8 ಆರೋಪಿಗಳನ್ನ ಅಕ್ಟೋಬರ್ 7ರವರೆಗೆ ಮಾದಕ ವಸ್ತು ನಿಗ್ರಹ ದಳದ ಕಸ್ಟಡಿಗೆ ನೀಡ್ತು. ಇನ್ನು ನಿನ್ನೆ ಮಾದಕ ವಸ್ತು ಸಿಕ್ಕಿದ್ದ ಕ್ರೂಸ್​ ಶಿಪ್​ನಲ್ಲಿ ಇವತ್ತು ಎನ್​​ಸಿಬಿ ಅಧಿಕಾರಿಗಳು ಮತ್ತೆ ಶೋಧಕಾರ್ಯ ನಡೆಸಿ, ಮತ್ತೆ 8 ಜನರನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಇನ್ನು ಮುಂಬೈನ ಗೋರೆಗಾಂವ್​ನಲ್ಲಿ ಮಾದಕ ವಸ್ತುಗೆ ಸಂಬಂಧಿಸಿದಂತೆ ಶ್ರೇಯಸ್​ ನಾಯರ್ ಅನ್ನೋನನ್ನ ಎನ್​ಸಿಬಿ ಅರೆಸ್ಟ್ ಮಾಡಿದೆ. ಈತ ಶಾರುಖ್ ಖಾನ್ ಪುತ್ರ ಆರ್ಯನ್​ ಖಾನ್​ ಜೊತೆ ಲಿಂಕ್​ ಹೊಂದಿದ್ದ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply