masthmagaa.com:
ಮುಂಬೈ ಕರಾವಳಿಯಲ್ಲಿ ಕ್ರೂಸ್ ಶಿಪ್ ಪಾರ್ಟಿ ಕೇಸ್ನಲ್ಲಿ ಸಿಕ್ಕಾಕ್ಕೊಂಡಿರೋ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರರನ್ನ ಮುಂಬೈನ ಸಿಟಿ ಕೋರ್ಟ್ ಅಕ್ಟೋಬರ್ 7ನೇ ತಾರೀಖಿನವರೆಗೆ ಎನ್ಸಿಬಿ ಕಸ್ಟಡಿಗೆ ಕಳಿಸಿದೆ. ಎನ್ಸಿಬಿ ಪರ ವಾದ ಮಾಡಿದ ಎಎಸ್ಜಿ ಅನಿಲ್ ಸಿಂಗ್, ಆರ್ಯನ್ ಖಾನ್ ಸೇರಿದಂತೆ ಪ್ರಮುಖ ಮೂರು ಆರೋಪಿಗಳನ್ನ ಮತ್ತಷ್ಟು ವಿಚಾರಣೆ ನಡೆಸಲು ಅವರನ್ನ ಮತ್ತೆ 9 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರು. ಅತ್ತ ಶಾರುಖ್ ಪುತ್ರ ಆರ್ಯನ್ ಖಾನ್ ಪರ ವಾದ ಮಂಡಿಸಿದ ವಕೀಲರಾದ ಸತೀಶ್ ಮಾನೆಶಿಂದೆ, ನನ್ನ ಕ್ಲೈಂಟ್ನಿಂದ ಯಾವುದೇ ಮಾದಕ ವಸ್ತುವನ್ನ ಸೀಜ್ ಮಾಡಿಲ್ಲ. ಒಂದ್ವೇಳೆ ಬೇರೆ ಆರೋಪಿಗಳ ಬಳಿ ಮಾದಕ ವಸ್ತು ಸಿಕ್ತು ಅಂತ ನನ್ನ ಕ್ಲೈಂಟ್ ಅನ್ನ ಕಸ್ಟಡಿಗೆ ತೆಗೆದುಕೊಳ್ಳೋದ್ರಲ್ಲಿ ಯಾವುದೇ ಆಧಾರವಿಲ್ಲ ಅಂತ ವಾದಿಸಿದ್ರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆರ್ಯನ್ ಸೇರಿದಂತೆ ಕ್ರೂಸ್ ಶಿಪ್ ಪಾರ್ಟಿಯ ಎಲ್ಲಾ 8 ಆರೋಪಿಗಳನ್ನ ಅಕ್ಟೋಬರ್ 7ರವರೆಗೆ ಮಾದಕ ವಸ್ತು ನಿಗ್ರಹ ದಳದ ಕಸ್ಟಡಿಗೆ ನೀಡ್ತು. ಇನ್ನು ನಿನ್ನೆ ಮಾದಕ ವಸ್ತು ಸಿಕ್ಕಿದ್ದ ಕ್ರೂಸ್ ಶಿಪ್ನಲ್ಲಿ ಇವತ್ತು ಎನ್ಸಿಬಿ ಅಧಿಕಾರಿಗಳು ಮತ್ತೆ ಶೋಧಕಾರ್ಯ ನಡೆಸಿ, ಮತ್ತೆ 8 ಜನರನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಇನ್ನು ಮುಂಬೈನ ಗೋರೆಗಾಂವ್ನಲ್ಲಿ ಮಾದಕ ವಸ್ತುಗೆ ಸಂಬಂಧಿಸಿದಂತೆ ಶ್ರೇಯಸ್ ನಾಯರ್ ಅನ್ನೋನನ್ನ ಎನ್ಸಿಬಿ ಅರೆಸ್ಟ್ ಮಾಡಿದೆ. ಈತ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆ ಲಿಂಕ್ ಹೊಂದಿದ್ದ ಅಂತ ಹೇಳಲಾಗ್ತಿದೆ.
-masthmagaa.com
Contact Us for Advertisement