ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ: ಹೈಕೋರ್ಟ್‌ ಕಳವಳ

masthmagaa.com:

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ದಿನೇ ದಿನೇ ವ್ಯಾಪಕವಾಗುತ್ತಿದ್ದು, ದುಡ್ಡು ಕೊಡದೇ ಯಾವ ಫೈಲೂ ಮುಂದಕ್ಕೆ ಚಲಿಸುವುದಿಲ್ಲ ಎಂಬ ದುಃಸ್ಥಿತಿ ನಿರ್ಮಾಣವಾಗಿದೆ ಅಂತ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಹಾಯಕ ಎಂಜಿನಿಯರ್ ಬಿ.ಟಿ.ರಾಜು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ರೀತಿ ಹೇಳಿದೆ. ಜೊತೆಗೆ ʻಆರೋಪಿ ರಾಜು ವಿರುದ್ಧ ಬಲವಾದ ಸಾಕ್ಷ್ಯಗಳಿರುವ ಕಾರಣ ಜಾಮೀನು ನೀಡಲು ಆಗದು’ ಅಂತ ಅರ್ಜಿಯನ್ನ ವಜಾಗೊಳಿಸಿದೆ.

-masthmagaa.com

Contact Us for Advertisement

Leave a Reply