ಯಾವುದೇ ಅಪರಾಧಿ ಉತ್ತರ ಪ್ರದೇಶದ ಉದ್ಯಮಿಗಳಿಗೆ ಬೆದರಿಕೆ ನೀಡೋಕೆ ಆಗಲ್ಲ: ಯೋಗಿ ಆದಿತ್ಯನಾಥ್

masthmagaa.com:

ಇನ್ಮುಂದೆ ಯಾವುದೇ ಮಾಫಿಯಾ ಅಥ್ವಾ ಅಪರಾಧಿ ಉತ್ತರ ಪ್ರದೇಶದ ಉದ್ಯಮಿಗಳಿಗೆ ಬೆದರಿಕೆ ನೀಡೋಕೆ ಆಗಲ್ಲ ಅಂತ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರರನ್ನ ಹತ್ಯೆ ಮಾಡಲಾಗಿತ್ತು. ಅದರ ಹಿನ್ನೆಲೆಯಲ್ಲಿ ಮಾತಾಡಿದ ಯೋಗಿ, ಫೋನ್‌ ಮೂಲಕ ಯಾವುದೇ ಅಪರಾಧಿ ಉದ್ಯಮಿಗಳಿಗೆ ಬೆದರಿಕೆ ನೀಡೋಕೆ ಆಗಲ್ಲ. ಉತ್ತರ ಪ್ರದೇಶ ಗಲಭೆಗಳಿಗೆ ಪ್ರಸಿದ್ದಿಯಾಗಿತ್ತು. ಹಲವು ಜಿಲ್ಲೆಗಳ ಹೆಸರುಗಳೇ ಜನರನ್ನ ಹೆದರಿಸುತ್ತಿತ್ತು. ಆದ್ರೆ ಈಗ ಹೆದರುವ ಅವಶ್ಯಕತೆಯಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಪರಿಣಾಮಕಾರಿ ಕಾನೂನು ಮತ್ತು ಸುವ್ಯವಸ್ಥೆಗೆ ಗ್ಯಾರಂಟಿ ಕೊಡ್ತೀನಿ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಅತೀಕ್‌ ಹಾಗೂ ಆತನ ಸಹೋದರ ಅಶ್ರಫ್‌ ಹತ್ಯೆ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಇಂದು ಒಪ್ಪಿಗೆ ನೀಡಿದೆ. ಏಪ್ರಿಲ್ 24 ರಂದು ಪ್ರಕರಣದ ವಿಚಾರಣೆ ನಡೆಸೋದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಮತ್ತೊಂದ್‌ ಕಡೆ ಯೋಗಿ ಆದಿತ್ಯನಾಥ್‌ ಅವ್ರನ್ನ ಶೂಟ್‌ ಮಾಡಿ ಹತ್ಯೆ ಮಾಡೋದಾಗಿ ಜಾರ್ಖಂಡ್‌ನ ಅಮನ್‌ ಶಾ ಅನ್ನೊ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ. ಈತನ ವಿರುದ್ಧ ಯುಪಿ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply