masthmagaa.com:
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಚೀತಾಗಳನ್ನು ಸ್ಥಳಾಂತರಿಸುವ ಯಾವುದೇ ಯೋಜನೆ ಇಲ್ಲ ಅಂತ ಕೇಂದ್ರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ. ಚೀತಾ ಯೋಜನೆಯ ಸೂಕ್ಷ್ಮತೆಯನ್ನು ಸರಕಾರ ಒಪ್ಪಿಕೊಂಡಿದೆ ಮತ್ತು ಇದು ಸಂಪೂರ್ಣ ಯಶಸ್ವಿ ಆಗಬೇಕೆಂದು ಬಯಸುತ್ತದೆ ಅಂತ ಯಾದವ್ ಹೇಳಿದ್ದಾರೆ. ಇತ್ತೀಚೆಗೆ ಆಫ್ರಿಕಾದಿಂದ ತರಲಾಗಿರುವ ಚೀತಾಗಳು ಸಾವನ್ನಪ್ಪುತ್ತಿವೆ. ಈ ಹಿನ್ನಲೆಯಲ್ಲಿ ಚೀತಾಗಳನ್ನ ಸ್ಥಳಾಂತರ ಮಾಡಲಾಗುತ್ತ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಯಾದವ್, ಸ್ಥಳಾಂತರಿಸೋ ಯಾವ ಯೋಜನೆ ನಮ್ಮ ಮುಂದಿಲ್ಲ. ಸ್ವಾಭಾವಿಕವಾಗಿ ಮುಂಗಾರು ಮಳೆಯಿಂದಾಗಿ ಕೀಟಗಳಿಂದ ಉಂಟಾಗುವ ಸೋಂಕು ನಮ್ಮ ಗಮನಕ್ಕೆ ಬಂದಿದೆ. ಈ ಸೋಂಕಿನಿಂದಾಗಿ ನಾವು 2 ಚೀತಾಗಳನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಈ ಬಗ್ಗೆ ನಾವು ದಕ್ಷಿಣ ಆಫ್ರಿಕಾ, ನಮೀಬಿಯಾದ ತಜ್ಞರೊಂದಿಗೆ ಮಾಹಿತಿಯನ್ನ ಹಂಚಿಕೊಂಡಿದ್ದು, ಈ ಕುರಿತು ಕೆಲಸ ಮಾಡಲಾಗ್ತಿದೆ ಅಂತ ಯಾದವ್ ಮಾಹಿತಿ ನೀಡಿದ್ದಾರೆ.
-masthmagaa.com
Contact Us for Advertisement