masthmagaa.com:
ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಇವತ್ತು ಫಸ್ಟ್ ಟೈಂ ಒಂದು ಬಿಲ್ ಬಗ್ಗೆ ಚರ್ಚೆಯಾಗಿದೆ. ತಮ್ಮದೇ ಒಬಿಸಿ ಲಿಸ್ಟ್ ರೆಡಿ ಮಾಡಿಕೊಳ್ಳಲು ರಾಜ್ಯಗಳಿಗೆ ಅವಕಾಶ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ 2021ನ್ನು ಲೋಕಸಭೆಯಲ್ಲಿ ಮಂಡಿಸಲಾಯ್ತು. ಈ ಬಗ್ಗೆ ದೀರ್ಘವಾಗಿ ಚರ್ಚೆ ನಡೆದು, ನಂತರ 3ನೇ 2ರಷ್ಟು ಬಹುಮತದೊಂದಿಗೆ ಪಾಸ್ ಮಾಡಲಾಗಿದೆ. ಈ ಬಿಲ್ ಸಂಬಂಧ ಚರ್ಚೆಯಲ್ಲಿ ನಾವು ಭಾಗಿಯಾಗ್ತೀವಿ ಅಂತ ವಿಪಕ್ಷದವರು ಮೊದಲೇ ಹೇಳಿದ್ರು. ಅದರಂತೆ ಚರ್ಚಿಸಿದ್ದಾರೆ. ಯಾಕಂದ್ರೆ ಈ ಬಿಲ್ ಎಲ್ಲಾ ಪಕ್ಷವರಿಗೂ ಅನಿವಾರ್ಯವೇ ಆಗಿದೆ. ಈ ಮಸೂದೆ ಒಬಿಸಿ ಅಂದ್ರೆ ಇತರೆ ಹಿಂದುಳಿಗ ವರ್ಗದಲ್ಲಿ ಬರೋ ಸಮುದಾಯಗಳನ್ನು ತಾವೇ ಲಿಸ್ಟ್ ಮಾಡಲು ರಾಜ್ಯಗಳಿಗೆ ಅವಕಾಶ ನೀಡುತ್ತೆ. ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ವಿಚಾರವಾದ್ರೆ, ನಮ್ಮ ರಾಜ್ಯದಲ್ಲಿ ಲಿಂಗಾಯತರಿಗೂ ಮೀಸಲಾತಿ ಕೂಗು ಕೇಳಿ ಬರ್ತಿದೆ. ಇಂತಾ ಹೊತ್ತಲ್ಲಿ ಈ ರೀತಿಯ ಮಸೂದೆ ಪಾಸ್ ಆಗಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇಷ್ಟೊಂದು ಮಹತ್ವದ ಮಸೂದೆ ಬಗ್ಗೆ ಚರ್ಚೆ ನಡೀತಿದ್ರೂ, ಕೆಲವರು ಪೆಗಾಸಸ್ ವಿಚಾರವಾಗಿ ಗಲಾಟೆ ಮಾಡಿದ್ರು. ಇಸ್ರೇಲ್, ಹಂಗೇರಿ ಮತ್ತು ಫ್ರಾನ್ಸ್ನಲ್ಲೇ ತನಿಖೆಗೆ ಆದೇಶಿಸಿದ್ದಾರೆ. ಆದ್ರೆ ಪ್ರಧಾನಿ ಮೋದಿ ಯಾಕೆ ಚರ್ಚೆಗೆ ಹೆದರ್ತಿದ್ದಾರೆ ಅಂತ ಪ್ರಶ್ನಿಸಿದ್ರು.
-masthmagaa.com
Contact Us for Advertisement