ಕೋವಿಡ್‌ ಪರಿಕರಗಳ ಬಿಲ್‌ ಪಾವತಿ ಮಾಡದ ಅಧಿಕಾರಿಗಳು, ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಗುತ್ತಿಗೆದಾರ!

masthmagaa.com:

ರಾಜ್ಯ ಸರ್ಕಾರದ ಮೇಲೆ 40% ಆರೋಪ ಕೇಳಿ ಬರ್ತಿರೊ ವೇಳೆಯಲ್ಲಿಯೇ ಹುಬ್ಬಳ್ಳಿಯ ಗುತ್ತಿಗೆದಾರರೊಬ್ಬರು ದಯಾಮರಣಕ್ಕೆ ಮನವಿ ಮಾಡಿರೋ ಅಂಶ ಬೆಳಕಿಗೆ ಬಂದಿದೆ. ಪಂಚಾಯ್ತಿಗಳಿಗೆ ಕೋವಿಡ್‌ ಪರಿಕರಗಳನ್ನ ಸಪ್ಲೈ ಮಾಡಿದ್ದ ಗುತ್ತಿಗೆದಾರ ಬಸವರಾಜ, ಬಿಲ್‌ ಪಾವತಿ ಮಾಡೋಕೆ ಕಮಿಷನ್‌ ಕೇಳ್ತಿದಾರೆ ಅಂತ ಆರೋಪಿಸಿದ್ದಾರೆ. ಇನ್ನು ಬಿಲ್‌ ಪಾವತಿಗಾಗಿ ಪದೇ ಪದೇ ಮನವಿ ಮಾಡಿದ್ರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ದಯಾಮರಣಕ್ಕೆ ಮನವಿ ಸಲ್ಲಿಸಿರೋದಾಗಿ ಬಸವರಾಜ್‌ ಹೇಳಿದ್ದಾರೆ. ಕೋವಿಡ್‌ ಮೊದಲ ಅಲೆ ಟೈಮಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲೂಕುಗಳ ಒಟ್ಟು 69 ಪಂಚಾಯತಿಗಳಿಗೆ ಬಸವರಾಜ ಪರಿಕರಗಳನ್ನ ಸರಬರಾಜು ಮಾಡಿದ್ರು.

-masthmagaa.com

Contact Us for Advertisement

Leave a Reply