masthmagaa.com:
ಜನವರಿ 26ರ ಹಿಂಸಾಚಾರ ಬಳಿಕ ದೆಹಲಿ ಗಡಿ ಭಾಗಗಳಲ್ಲಿ ಪೊಲೀಸರು ಭಾರಿ ಪ್ರಮಾಣದಲ್ಲಿ ಬ್ಯಾರಿಕೇಡ್ ಹಾಕಿ, ರಸ್ತೆ ಅಗೆದು ಮೊಳೆಗಳನ್ನ ಹಾಕಿಟ್ಟಿದ್ದಾರೆ. ಪ್ರತಿಭಟನಾಕಾರರು ಇನ್ನೊಂದ್ಸಲ ಟ್ರಾಕ್ಟರ್ ತಂದು ಮೊನ್ನೆ ಮಾಡ್ದಂತೆ ಮಾಡ್ಬಾರ್ದು ಅನ್ನೋದು ಇದ್ರ ಹಿಂದಿನ ಉದ್ದೇಶ. ಆದ್ರಿವತ್ತು ಬೆಳಗ್ಗೆ ಗಾಜಿಪುರ್ ಗಡಿಯಲ್ಲಿ ಹಾಕಿದ್ದ ಮೊಳೆಗಳನ್ನ ತೆಗೆಯಲಾಯ್ತು. ಇದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆದ್ರೆ ಯಾಕೆ ತೆಗೀತಿದ್ದಾರೆ ಅನ್ನೋದು ಗೊತ್ತಾಗಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರೋ ದೆಹಲಿ ಪೊಲೀಸರು, ನಾವು ಮೊಳೆಗಳನ್ನ ತೆಗೆದಿಲ್ಲ. ಬೇರೆ ಕಡೆ ಶಿಫ್ಟ್ ಮಾಡಿದ್ದೇವೆ ಅಂತ ಹೇಳಿದ್ದಾರೆ. ಸೋ ಮೊಳೆಗಳು ಇರುತ್ತೆ, ಆದ್ರೆ ಜಾಗ ಚೇಂಜ್ ಆಗಿದೆ ಅಷ್ಟೇ.
#WATCH | Nails that were fixed near barricades at Ghazipur border (Delhi-UP border) are being removed. pic.twitter.com/YWCQxxyNsH
— ANI (@ANI) February 4, 2021
ಮತ್ತೊಂದುಕಡೆ ದೆಹಲಿಯಲ್ಲಿ ನಿಯೋಜಿಸಿರುವ ಎಲ್ಲಾ ಸಿಆರ್ಪಿಎಫ್ ಯೂನಿಟ್ಗಳು ತಮ್ಮ ಬಸ್ಗಳಿಗೆ ವೈರ್ ಮೆಷ್ ಅಳವಡಿಸುವಂತೆ ಆದೇಶಿಸಲಾಗಿದೆ. ಈ ಕೆಲಸವನ್ನ ಶನಿವಾರದೊಳಗೆ ಸಮರೋಪಾದಿಯಲ್ಲಿ ಮುಗಿಸುವಂತೆಯೂ ಸೂಚಿಸಲಾಗಿದೆ. ದೆಹಲಿಯಲ್ಲಿ ನಿಯೋಜಿಸಿರುವ ಸಿಆರ್ಪಿಎಫ್ ತುಕಡಿಗಳು ಮತ್ತೆರಡು ವಾರ ಅಲ್ಲೇ ಇರುವಂತೆಯೂ ಹೇಳಲಾಗಿದೆ. ಅಂದ್ಹಾಗೆ ಶನಿವಾರ ಹೆದ್ದಾರಿಗಳನ್ನ ಬಂದ್ ಮಾಡಲು ರೈತ ಸಂಘಟನೆಗಳು ಕರೆ ಕೊಟ್ಟಿವೆ. ಹೀಗಾಗಿ ಪೊಲೀಸರು, ಸಿಆರ್ಪಿಎಫ್ ಮತ್ತು ಆರ್ಎಎಫ್ ತುಕಡಿಗಳು ಅಗತ್ಯ ತಯಾರಿ ಮಾಡಿಕೊಳ್ತಿದ್ದಾರೆ.
ಇನ್ನು ಗಾಜಿಪುರ್ ಗಡಿಯಲ್ಲಿ ವಾಸ್ತವ ಪರಿಸ್ಥಿತಿ ಹೇಗಿದೆ ಅನ್ನೋದನ್ನ ಕಣ್ಣಾರೆ ನೋಡಲು ಮತ್ತು ರೈತ ಮುಖಂಡರನ್ನ ಭೇಟಿಯಾಗಲು ವಿಪಕ್ಷಗಳ ನಿಯೋಗ ಇವತ್ತು ಗಾಜಿಪುರ್ ಗಡಿಗೆ ಹೋಯ್ತು. ಆದ್ರೆ ಪೊಲೀಸರು ಅವರನ್ನ ಪ್ರತಿಭಟನಾ ಸ್ಥಳಕ್ಕೆ ಹೋಗಲು ಬಿಡಲೇ ಇಲ್ಲ. ಈ ವೇಳೆ ಮಾತನಾಡಿದ ಶಿರೋಮಣಿ ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್, ಅನ್ನದಾತರಿಗೆ ನೀಡುತ್ತಿರೋ ಟ್ರೀಟ್ಮೆಂಟ್ ನೋಡಿ ಶಾಕ್ ಆಯ್ತು. ರೈತರು ಪ್ರತಿಭಟನೆ ನಡೆಸ್ತಿರುವ ಸ್ಥಳಕ್ಕೆ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು ಹೋಗೋಕೂ ಆಗಲ್ಲ. ಆ ರೀತಿ ಮಾಡಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
ಅತ್ತ ಜನವರಿ 26ರ ಟ್ರಾಕ್ಟರ್ ಪರೇಡ್ ವೇಳೆ ಕೆಳಗಿ ಬಿದ್ದು ಮೃತಪಟ್ಟಿದ್ದ ರೈತನ ಮನೆಗೆ ಇವತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡಿದ್ರು.
-masthmagaa.com
Contact Us for Advertisement