masthmagaa.com:
ಕೆಲವರಿಗೆ ನೀವು ಕಾಲ್ ಮಾಡ್ದಾಗ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಧ್ವನಿ ಕೇಳೋದನ್ನ ಗಮನಿಸಿರಬಹುದು. ಕೊರೋನಾಗೆ ಸಂಬಂಧಿಸಿದಂತೆ ದೈಹಿಕ ಅಂತರ ಕಾಪಾಡಿ, ಕೈಗಳನ್ನ ಆಗಾಗ ತೊಳೆಯಿರಿ, ಸುರಕ್ಷತೆ ಕಾಪಾಡಿಕೊಳ್ಳಿ, ಎಚ್ಚರ ತಪ್ಪಬೇಡಿ ಅಂತೆಲ್ಲಾ ಆ ಕಾಲರ್ ಟ್ಯೂನ್ ಮೂಲಕ ಜಾಗೃತಿ ಮೂಡಿಸಲಾಗ್ತಿದೆ. ಆದ್ರೀಗ ಅಮಿತಾಬ್ ಬಚ್ಚನ್ ಧ್ವನಿಯ ಆ ಕಾಲರ್ ಟ್ಯೂನ್ ಅನ್ನು ತೆಗೆಯುವಂತೆ ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ (PIL) ಸಲ್ಲಿಸಲಾಗಿದೆ. ರಾಕೇಶ್ ಎಂಬುವವರು ಈ ಅರ್ಜಿಯನ್ನ ಸಲ್ಲಿಸಿದ್ದಾರೆ. ಇದರಲ್ಲಿ, ‘ಅಮಿತಾಬ್ ಬಚ್ಚನ್ ಅವರು ಈ ಸೇವೆಗೆ ದುಡ್ಡು ತಗೋತಾರೆ. ಕೇಂದ್ರ ಸರ್ಕಾರ ಅವರಿಗೆ ದುಡ್ಡು ಕೊಡ್ತಿದೆ. ಹೀಗಾಗಿ ಅಮಿತಾಬ್ ಬಚ್ಚನ್ ಈ ಸೇವೆಗೆ ಅರ್ಹರಲ್ಲ. ದೇಶದಲ್ಲಿ ಕೆಲ ಕೊರೋನಾ ವಾರಿಯರ್ಸ್ ಬಡವರು ಮತ್ತು ಅಗತ್ಯ ಇರೋರಿಗೆ ಸಹಾಯ ಮಾಡ್ತಿದ್ದಾರೆ. ಕೆಲ ಕೊರೋನಾ ವಾರಿಯರ್ಸ್ ತಾವು ಕಷ್ಟಪಟ್ಟು ದುಡಿದ ಹಣವನ್ನ ಕೊಡ್ತಿದ್ದಾರೆ. ಇನ್ನೂ ಕೆಲ ಕೊರೋನಾ ವಾರಿಯರ್ಸ್ ಯಾವುದೇ ಹಣ ಪಡೆಯದೇ ಸೇವೆ ಸಲ್ಲಿಸಲು ರೆಡಿ ಇದ್ದಾರೆ’ ಅಂತ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಅಮಿತಾಬ್ ಬಚ್ಚನ್ ಅವರ ಇತಿಹಾಸ ಸರಿ ಇಲ್ಲ. ಅವರು ಸಾಮಾಜಿಕ ಕಾರ್ಯಕರ್ತರಾಗಿ ದೇಶಕ್ಕೆ ಸೇವೆ ಸಲ್ಲಿಸಿಲ್ಲ ಅಂತಾನೂ ಹೇಳಲಾಗಿದೆ. ಈ ಅರ್ಜಿಯ ವಿಚಾರಣೆ ಜನವರಿ 18ನೇ ತಾರೀಖು ನಡೆಯಲಿದೆ.
-masthmagaa.com
Contact Us for Advertisement