masthmagaa.com:
ಲೋಕಸಭೆ ಚುನಾವಣೆ ಹೊತ್ತಲ್ಲಿ ಕೇರಳ ರಾಜಕೀಯದಲ್ಲಿ ಭಾರೀ ವಾಕ್ಸಮರ ಶುರುವಾಗಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನ ಕೇರಳ ಸಿಎಂ ಪಿಣರಾಯಿ ವಿಜಯನ್ ಅಮುಲ್ ಬೇಬಿ ಅಂತ ಕರೆದಿದ್ದಾರೆ. ನೇರವಾಗಿ ಹೇಳಿಲ್ಲ. ಹೇಗೆ ಅಂತ ಮುಂದೆ ಹೇಳ್ತಿವಿ. ಮೊನ್ನೆ ರಾಹುಲ್ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ರು ʻಬಿಜೆಪಿ ಅದ್ಯಾಕೆ ಕೇರಳ ಸಿಎಂ ಮೇಲೆ ದಾಳಿ ಮಾಡಲ್ಲ…ಪಿಣರಾಯಿ ವಿಜಯನ್ ಯಾಕೆ ಅರೆಸ್ಟ್ ಮಾಡಲ್ಲ ಅಂತ ಪ್ರಶ್ನಿಸಿದ್ರು. ಅಂದ್ರೆ ಇಬ್ರಿಗೂ ಒಳ ಒಪ್ಪಂದ ಆಗಿದೆ ಅನ್ನೋ ಅರ್ಥದಲ್ಲಿ ರಾಹುಲ್ ಹೇಳಿದ್ರು. ಇದಕ್ಕೆ ರಿಯಾಕ್ಟ್ ಮಾಡಿರೋ ಪಿಣರಾಯಿ ವಿಜಯನ್ ʻರಾಹುಲ್ ನಾನ್ಯಾಕೆ ಜೈಲಿಗೆ ಹೋಗಿಲ್ಲ ಅಂತ ಕೇಳಿದ್ದಾರೆ. ಬಹುಶಃ ನಿಮಗೆ ಗೊತ್ತಿಲ್ಲ, ನಿಮ್ಮ ಅಜ್ಜಿ ನನ್ನ ಒಂದುವರೆ ವರ್ಷ ಜೈಲಲ್ಲಿ ಇಟ್ಟಿದ್ರು. ನಾವು ಆವಾಗಲೇ ಸಾಕಷ್ಟು ವಿಚಾರಣೆ ಮತ್ತು ಬಂಧನಗಳನೆಲ್ಲಾ ಫೇಸ್ ಮಾಡಿದ್ವಿ. ಆದ್ರೆ ರಾಹುಲ್ ನಿಮಗೆ ಒಂದು ಹಳೇ ಹೆಸರು ಇದೆ. ಬಹುಶಃ ಅಲ್ಲಿಂದ ನೀವು ಇನ್ನೂ ಇಂಪ್ರುವ್ ಆಗಿಲ್ಲ ಅನ್ಸುತ್ತೆʼ ಅಂತ ಲೇವಡಿ ಮಾಡಿದ್ದಾರೆ. ಅಂದ್ಹಾಗೆ… ಹಲವು ವರ್ಷಗಳ ಹಿಂದೆ ರಾಹುಲ್ ಗಾಂಧಿ ಕೇರಳಕ್ಕೆ ಪ್ರಚಾರಕ್ಕೆ ಬಂದಿದ್ದಾಗ ಅಮುಲ್ ಬೇಬಿಗಳು ಬಂದಿದ್ದಾರೆ ಅಂತ ಟೀಕಿಸಿದ್ರು. ಸೋ…ಇದನ್ನ ಉಲ್ಲೇಖಿಸಿ ವಿಜಯನ್ ರಾಹುಲ್ಗೆ ಕಿಚಾಯಿಸಿದ್ದಾರೆ ಅಂತೇಳಲಾಗ್ತಿದೆ. ಇನ್ನೊಂದು ಕಡೆ ರಾಹುಲ್ರನ್ನ ಪ್ರಧಾನಿ ಮೋದಿಯವ್ರು ಲೇವಡಿ ಮಾಡಿದ್ದಾರೆ. ʻಅಮೇತಿ ಲೋಕಸಭಾ ಕ್ಷೇತ್ರದಿಂದ ಓಡಿ ಹೋದ ಹಾಗೇ….ಅವರು ವೈನಾಡ್ ಕ್ಷೇತ್ರದಿಂದಲೂ ಓಡಿ ಹೋಗ್ತಾರೆʼ ಅಂತ ಹೇಳಿದ್ದಾರೆ. ಇನ್ನೊಂದ್ಕಡೆ ಚುನಾವಣಾ ರ್ಯಾಲಿ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೀಸಲಾತಿ ಸಂಬಂಧ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ʻಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿಯನ್ನ ಕಾಂಗ್ರೆಸ್ ಪಕ್ಷ ತೆಗೆಯೋಕೆ ಬಯಸಿದ್ರೂ…ನಾವು ಆ ರೀತಿ ಆಗೋಕೆ ಬಿಡಲ್ಲ. ಯಾಕಂದ್ರೆ ಇದು ಮೋದಿಯವ್ರ ಗ್ಯಾರಂಟಿ. ಮೋದಿ ಒಬಿಸಿ ಸಮುದಾಯಕ್ಕೆ ಸೇರಿದವ್ರು. ಈ ಸ್ಕೀಮ್ನ್ನ ಹಿಂದುಳಿದ ವರ್ಗಗಳಿಗಾಗಿ ಮೋದಿಯವ್ರು ಇಂಪ್ಲಿಮೆಂಟ್ ಮಾಡಿರೋದುʼ ಅಂತೇಳಿದ್ದಾರೆ.
-masthmagaa.com
Contact Us for Advertisement