masthmagaa.com:
ವಿಮಾನವೊಂದ್ರಲ್ಲಿ ಬಾಂಬ್ ಇದೆ ಅಂತ ಕರೆ ಬಂದ ಕಾರಣ ಹಾರಾಟ ಸ್ಥಗಿತಗೊಂಡ ಘಟನೆ ಶ್ರೀನಗರದಲ್ಲಿ ನಡೆದಿದೆ. ಗೋ ಏರ್ ವಿಮಾನವೊಂದು ದೆಲ್ಲಿಗೆ ಹಿಂತಿರುಗಬೇಕಿತ್ತು. ಆದ್ರೆ ಇನ್ನೊಂದು ಖಾಸಗಿ ಏರ್ಲೈನ್ನ ಮ್ಯಾನೇಜರ್ಗೆ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಕರೆ ಬಂದಿದೆ. ಆ ನಂತ್ರ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ. ವಿಮಾನವನ್ನ ಪೂರ್ಣವಾಗಿ ಶೋಧಿಸಿದ್ದು ಏನು ಪತ್ತೆಯಾಗಿಲ್ಲ ಅಂತ ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ. ಕರೆ ದೆಲ್ಲಿಯಲ್ಲಿ ಟ್ರೇಸ್ ಆಗಿದೆ. ನಂತ್ರ ಸ್ವಿಚ್ ಆಫ್ ಮಾಡಲಾಗಿದೆ. ಪೋಲಿಸರು ಈ ಬಗ್ಗೆ ತನಿಖೆ ನಡೆಸ್ತಿದ್ದಾರೆ ಅಂತ IGP ವಿಜಯ್ ಕುಮಾರ್ ಹೇಳಿದ್ದಾರೆ.
-masthmagaa.com
Contact Us for Advertisement