masthmagaa.com:
ಕೊರೋನಾ ಹಾವಳಿ ನಿಯಂತ್ರಣಕ್ಕೆ ತರಲು ಹೇರಿದ್ದ 4ನೇ ಹಂತದ ಲಾಕ್ಡೌನ್ ಅಂತ್ಯಗೊಳ್ಳಲು ಇನ್ನೆರಡು ದಿನ ಬಾಕಿ ಇದೆ. ಹೀಗಾಗಿ ಜೂನ್ 1ರಿಂದ ಲಾಕ್ಡೌನ್ ಇರುತ್ತಾ..? ಇಲ್ವಾ..? ಇದ್ರೆ ಹೇಗಿರುತ್ತೆ..? ಲಾಕ್ಡೌನ್ ಸಡಿಲವಾಗುತ್ತಾ ಅಥವಾ ಕಾಯಿಲೆ ಹಾವಳಿ ಜಾಸ್ತಿಯಾಗ್ತಿರೋದ್ರಿಂದ ಮತ್ತಷ್ಟು ಬಿಗಿಯಾಗುತ್ತಾ..? ಅನ್ನೋ ಹತ್ತು ಹಲವು ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿಯಾಗಿದ್ದಾರೆ. ಈ ವೇಳೆ ಲಾಕ್ಡೌನ್ ಕುರಿತು ಮಹತ್ವದ ಮಾತುಕತೆ ನಡೆಯಲಿದೆ ಎನ್ನಲಾಗಿದೆ.
ನಿನ್ನೆಯಷ್ಟೇ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದ ಅಮಿತ್ ಶಾ ಲಾಕ್ಡೌನ್ ಕುರಿತು ಸಲಹೆ ನೀಡುವಂತೆ ಕೇಳಿದ್ರು. ಇದರ ಬೆನ್ನಲ್ಲೇ ಇಂದು ಪ್ರಧಾನಿ ಭೇಟಿಯಾಗುತ್ತಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಒಂದೆರಡು ದಿನಗಳಲ್ಲಿ ಲಾಕ್ಡೌನ್ ವಿಸ್ತರಿಸುವ ಕುರಿತು ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಧಾರ್ಮಿಕ ಕೇಂದ್ರಗಳು, ಹೋಟೆಲ್, ರೆಸ್ಟೋರೆಂಟ್ಗಳನ್ನ ತೆರೆಯಲು ಅವಕಾಶ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಲಾಕ್ಡೌನ್ ಮತ್ತೆ 15 ದಿನ ವಿಸ್ತರಣೆಯಾಗಬೇಕು ಅಂತ ಗೋವಾ ಸಿಎಂ ಪ್ರಮೋದ್ ಸಾವಂತ್ ಆಗ್ರಹಿಸಿದ್ದಾರೆ. ಈ ಬಗ್ಗೆ ಅಮಿತ್ ಶಾ ಜೊತೆ ಫೋನ್ ಮೂಲಕ ಮಾತನಾಡಿರೋ ಅವರು, ಗೋವಾದಲ್ಲಿ ಸೋಂಕು ಹೆಚ್ಚಾಗುತ್ತಿರೋದ್ರಿಂದ ಲಾಕ್ಡೌನ್ ವಿಸ್ತರಿಸಿ. ಆದ್ರೆ ಹೋಟೆಲ್, ರೆಸ್ಟೋರೆಂಟ್ಗಳನ್ನ ತೆರೆಯಲು ವಿನಾಯಿತಿ ನೀಡಿ ಅಂತ ಮನವಿ ಮಾಡಿದ್ದಾರೆ.
-masthmagaa.com
Contact Us for Advertisement