masthmagaa.com:
ಚಂಡೀಗಢದ ವಿಮಾನ ನಿಲ್ಧಾಣಕ್ಕೆ ಕ್ರಾಂತಿಕಾರಿ ಭಗತ್ಸಿಂಗ್ ಹೆಸರು ಇಡ್ತೀವಿ ಅಂತ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಮನ್ ಕೀ ಬಾತ್ನಲ್ಲಿ ಈ ಬಗ್ಗೆ ಮಾತನಾಡಿದ ಮೋದಿ ಸ್ವಾತಂತ್ರ ಹೋರಾಟಗಾರರಿಗೆ ಗೌರವ ಸಲ್ಲಿಸೋ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ ಅಂತ ಹೇಳಿದ್ದಾರೆ. ಇನ್ನು ಇದೇ ವೇಳೆ ಪಾಸ್ಲಿಕ್ ಬಳಕೆಯನ್ನ ನಿಲ್ಲಿಸಿ ಅಂತ ಕೂಡ ಮೋದಿ ದೇಶದ ಜನತೆಗೆ ಕರೆನೀಡಿದ್ದಾರೆ. ಅಂದ್ಹಾಗೆ ಚಂಡೀಗಡ ಏರ್ಪೋರ್ಟ್ಗೆ ಭಗತ್ ಸಿಂಗ್ ಹೆಸರು ಇಡೋ ಸಂಬಂಧ ಈ ಹಿಂದೆ ಕೂಡ ಪಂಜಾಬ್ನ ಆಪ್ ಸರ್ಕಾರ ಹೇಳಿತ್ತು. ಅದಕ್ಕೆ ಪಂಜಾಬ್ ಹಾಗೂ ಹರ್ಯಾಣ ಎರಡೂ ರಾಜ್ಯಗಳೂ ಒಪ್ಪಿಕೊಂಡಿದ್ವು. ಅದರ ಮುಂದುವರೆದ ಭಾಗವಾಗಿ ಮೋದಿ ಈ ಅನೌನ್ಸ್ ಮಾಡಿದ್ದಾರೆ.
-masthmagaa.com
Contact Us for Advertisement